LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಕಾರ್ಮಿಕರ ಬೇಡಿಕೆಗಳ ಕೂಡಲೇ ಈಡೇರಿಸಬೇಕೆಂದು ಪ್ರತಿಭಟನೆ :ತಹಸೀಲ್ದಾರ್ ಅವರ ಮೂಲಕ ಮನವಿ

Advertisement

ಬೆಳಗಾವಿ :ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಇಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ ಸಂಘ ಬೆಳಗಾವಿ ಜಿಲ್ಲಾ ಘಟಕದಿಂದ ಕಾರ್ಮಿಕ ಮಂಡಳಿಯಿಂದ ನೈಜವಾಗಿ ಸಿಗುವ ಸೌಲಭ್ಯಗಳಿಂದ ಕಾರ್ಮಿಕರೆಲ್ಲರೂ ವಂಚಿತರಾಗುತ್ತಿದ್ದಾರೆ, ಹಾಗೂ ಕಟ್ಟಡ ಕಾರ್ಮಿಕರ  ನೊಂದಾಯಿತ ಫಲಾನುಭವಿಗಳಿಗೆ ಮತ್ತು ಅವರ ಮಕ್ಕಳಿಗೆ ಸಾಮಾಜಿಕ ಭದ್ರತೆಗಳ ಅಡಿಯಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ಕಳೆದ ಎರಡು ಮೂರು ವರ್ಷಗಳಿಂದ "ಡಿ ಬಿ ಟಿ" ಮುಖಾಂತರ  ವಿಳಂಬವಾಗಿ ಹಣ ಜಮೆ ಆಗುತ್ತಿವೆ. ಹೀಗಾಗಿ ಕಾರ್ಮಿಕರಿಗೆ ಸರಿಯಾದ ಸಮಯಕ್ಕೆ ಬ್ಯಾಂಕ್ ಖಾತೆಗೆ ಹಣ ಜಮಾ ಆಗದೇ ಇರುವುದು ಕಾರ್ಮಿಕರಿಗೆ ಬೇಸರವಾಗಿದೆ.
news_1786424358_0_476.webp

 

ಆದ್ದರಿಂದ ಅತೀ ಶೀಘ್ರದಲ್ಲಿ  ಸಕಾಲದಲ್ಲಿ ಹಣ ಜಮಾ ಮಾಡುವಂತೆ ಹಾಗೂ ಆನ್ ಲೈನ್ ತಂತ್ರಾಂಶದಲ್ಲಿರುವ ಸಮಸ್ಯೆಗಳ ಕುರಿತು ಪರಿಶೀಲಿಸಿ, ಸಮಸ್ಯೆ ಇರುವುದನ್ನು ಅತೀ ಶೀಘ್ರದಲ್ಲಿ ಸರಿಪಡಿಸುವಂತೆ ಇಂದು ಬೆಳಗಾವಿ ಜಿಲ್ಲೆಯ ರಾಮದುರ್ಗ ಬಿ.ಎಂ.ಸ್ ಕಟ್ಟಡ  ಕಾರ್ಮಿಕರ ಆಫೀಸನಿಂದ ಎಲ್ಲಾ ಕಾರ್ಮಿಕರು ಕಾಲನಡಿಗೆಯಲ್ಲಿ ಘೋಷಣೆಗಳನ್ನು ಕೂಗುವ ಮುಖಾಂತರ ತಹಸೀಲ್ದಾರ್ ಕಚೇರಿಯವರೆಗೂ ಹೊಗಿ  ಕಟ್ಟಡ ಕಾರ್ಮಿಕ ಮುಖಂಡರುಗಳ ಸಹಭಾಗಿತ್ವದಲ್ಲಿ ರಾಮದುರ್ಗ ಮಾನ್ಯ ತಹಶೀಲ್ದಾರ್  ಸಾಹೇಬರ ಮುಖಾಂತರ "ಕರ್ನಾಟಕ ರಾಜ್ಯ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಬೆಂಗಳೂರು" ಇವರಿಗೆ, ಬಿಎಂಎಸ್ ಸಂಘಟನೆ ಮುಖಾಂತರ  ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ  ಜಿಲ್ಲಾ ಸಂಘಟನಾ ಕಾರ್ಯದರ್ಶಿಆದ ಶ್ರೀ ಮಾರುತಿ ವಾರ್ತೆಪ್ಪನವರ, ಪ್ರೇಮ ಆಲಗುಂಡಿ  ಕಾರ್ಮಿಕ ಮುಖಂಡರುಗಳಾದ ಬಸು ಚಿಕ್ಕಮಠ ಭೀಮಸಿ ಶಿಂಧಿ ಬಾಲಕೃಷ್ಣ ವಡ್ಡರ್,ಚಿದಾನಂದ ಹರ್ತಿ, ಮಕ್ತುಮಸಾಬ್ ಅತ್ತಾರ,ಮೈಲಾರಿ ವಡ್ಡರ್, ಮಾನಿಂಗಯ್ಯ  ಹಿರೇಮಠ್, ವಿಠ್ಠಲ ವಾರ್ತೆಪ್ಪನವರ್, ಸುಭಾಶ ಜಲಗೇರಿ, ಸೋಮನಾಥ ಅಪ್ಪನ್ನವರ, ರಾಜು ಮುದಕವಿ,  ಯಂಕಪ್ಪ ದಾಸರ, ರಾಜು ಹಳೇಮನಿ, ರಮೇಶ ದಾಸರ,ಹಾಗೂ ಕಾರ್ಮಿಕರ ಸರ್ವ ಸದಸ್ಯರುಗಳ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.

 ವರದಿ: ಮಂಜುನಾಥ ಕಲಾದಗಿ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಅತ್ಯಾಚಾರ ಆರೋಪ: ಐಪಿಎಲ್ ಆಟಗಾರ ಅಭಿಷೇಕ ಪೊರೆಲ್ ಬಂಧನಪತ್ನಿ ಮೇಲಿನ ಅನುಮಾನಕ್ಕೆ ಮನೆಯೊಳಗೆ ಜಿಲೆಟಿನ್ ಕಡ್ಡಿ ಸ್ಫೋಟ : ತಂದೆ-ಮಗಳು ಸಾವು11,000 ಅತಿಥಿ ಶಿಕ್ಷಕರ ನೇಮಕಕ್ಕೆ ಶಾಲಾ ಶಿಕ್ಷಣ ಇಲಾಖೆ ಆದೇಶ ಅನಿವಾರ್ಯವಾಗಿ ರಾಜೀನಾಮೆ ಪತ್ರಿಕೆ ಸಹಿ ಹಾಕಿದೆ : ಬಸವರಾಜ ಹೊರಟ್ಟಿ ಬಾಗಲಕೋಟೆಯಲ್ಲಿ ಬಿಜೆಪಿಯಿಂದ ಭವ್ಯ ತಿರಂಗಾ ಯಾತ್ರೆ:ಗಮನ ಸೆಳೆದ 500 ಮೀಟರ್ ಉದ್ದದ ಬೃಹತ್ ರಾಷ್ಟ್ರಧ್ವಜಅಧಿವೇಶನದಲ್ಲಿ ಬಿ. ನಾಗೇಂದ್ರ ಉತ್ತರಗಳನ್ನು ಬಹಿಷ್ಕರಿಸಲು ಬಿಜೆಪಿ ನಿರ್ಧಾರ ಒಂದೇ ದಿನ ಬರೋಬ್ಬರಿ 8,347 ಕೋಟಿ ರು. ಗಳಿಸಿದ ಎಲಾನ್ ಮಸ್ಕ್ ಹೇಮಾವತಿ ನೀರು ಹರಿಸುವಂತೆ ಒತ್ತಾಯಿಸಿ ಬಿಜೆಪಿ, ಜೆಡಿಎಸ್ ಇಂದ ಬೃಹತ್ ಪ್ರತಿಭಟನೆಸಿಂಧನೂರು  ಬಿಜೆಪಿ ಗ್ರಾಮೀಣ ಮಂಡಲ ಬೃಹತ್ ಪ್ರತಿಭಟನೆ!ಹಾನಗಲ್ ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದ ರಾಜಕಾಲುವೆಯ ತಡೆಗೋಡೆ ಕುಸಿತ.!ಕಳಪೆ ಕಾಮಗಾರಿ ಆರೋಪ