ಬೆಳಗಾವಿ: ಮಳೆಯ ತೀವ್ರ ಕೊರತೆಯಿಂದ ಬಹುತೇಕ ಖಾಲಿಯಾಗಿದ್ದ ಹಿಡಕಲ್ ಜಲಾಶಯಕ್ಕೆ ಕೊನೆಗೂ ಒಳಹರಿವು ಆರಂಭವಾಗಿದೆ.
ಮಹಾರಾಷ್ಟ್ರದ ಅಂಬೋಲಿ ಮತ್ತು ಸಾವಂತವಾಡಿ ಅರಣ್ಯ ಪ್ರದೇಶದಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿದ್ದು, ಇದರಿಂದ ಘಟಪ್ರಭಾ ನದಿಯ ಮೂಲಕ ಹಿಡಕಲ್ಲಾ ಶಯಕ್ಕೆ ನೀರು ಬರಲಾರಂಭಿಸಿದೆ.
ಹೊಸ ನೀರು ಬರುತ್ತಿರುವಂತೆ ನದಿ ಪಾತ್ರದ ಹಾಗೂ ಜಲಾಶಯವನ್ನೇ ನಂಬಿಕೊಂಡಿರುವ ಜನರಲ್ಲಿ ಸ್ವಲ್ಪ ಸಮಾಧಾನ ಮೂಡಿದೆ.
ಲಭ್ಯವಾದ ಮಾಹಿತಿಯಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಜಲಾಶಯಕ್ಕೆ 558 ಕ್ಯೂಸೆಕ್ಸ್ ನೀರು ಬರುತ್ತಿದೆ. ಕಳೆದ ವರ್ಷ ಇದೇ ಸಮಯದಲ್ಲಿ ಜಲಾಶಯಕ್ಕೆ 16 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿತ್ತು.
2175 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಈಗ 2091 ಅಡಿ ಮಾತ್ರ ನೀರಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 2150 ಅಡಿ ನೀರು ಸಂಗ್ರಹವಿತ್ತು.


