[video width="848" height="478" mp4="https://bharathvaibhav.com/wp-content/uploads/2025/06/WhatsApp-Video-2025-06-07-at-7.22.10-AM-2.mp4"][/video]
18 ವರ್ಷಗಳ ಬಳಿಕ ಆರ್.ಸಿ.ಬಿ ತಂಡವು ಚೊಚ್ಚಲ ಐಪಿಎಲ್ ಕಪ್ ವನ್ನು ತನ್ನ ಮುಡಿಗೆರಿಸಿಕೊಂಡಿದೆ.ಇದರಿಂದಾಗಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಆರ.ಸಿ.ಬಿ ಅಭಿಮಾನಿ ನಾಗೇಶ ಮಂಗುಟೆ ತಮ್ಮ ವಡಾ-ಪಾವ ಅಂಗಡಿಯಲ್ಲಿ ಆರ್.ಸಿ.ಬಿ ಗೆದ್ದರೆ ಉಚಿತವಾಗಿ ವಡಾ-ಪಾವ ನೀಡುವುದಾಗಿ ಘೋಷಿಸಿದರು.ಅದರಂತೆ ಆರ್.ಸಿ.ಬಿ ಫೈನಲ್ ನಲ್ಲಿ ಗೆಲವು ಸಾಧಿಸಿದೆ.

ಕೊಟ್ಟ ಮಾತಂತೆ ನಾಗೇಶ ಮಂಗುಟೆಯವರು ಉಚಿತವಾಗಿ ಸಾಯಂಕಾಲ 4-8 ವರೆಗೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡಿದ್ದಾರೆ. 2500 ಜನರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ.ಜನರು ಸಾಲಿನಲ್ಲಿ ನಿಂತೂ ವಡಾ-ಪಾವ ತಿಂದು ನಾಗೇಶಯವರ ಅಭಿಮಾನವನ್ನು ಹಾಡಿಹೊಗಳಿದ್ದಾರೆ.
ಇದೇ ಸಂಧರ್ಭದಲ್ಲಿ ನಾಗೇಶ ಮಂಗಟೆಯವರು ಮಾತನಾಡಿ ನಾನು ಮೊದಲನಿಂದಲೂ ಆರ್.ಸಿ.ಬಿ ತಂಡದ ಅಭಿಮಾನಿ ರಾಹುಲ್ ದ್ರಾವಿಡ ಹಿಡಿದು ವಿರಾಟ ಕೊಹ್ಲಿಯವರ ಪಕ್ಕಾ ಅಭಿಮಾನಿ ನಾನು.ಆರ್.ಸಿ.ಬಿ ಟ್ರೋಫಿ ಗೆದ್ದರೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡುವದಾಗಿ ಹೇಳಿಕೊಂಡಿದೆ.ಅದರಂತೆ ಇವತ್ತು ಉಚಿತವಾಗಿ ವಡಾ-ಪಾವ ವಿತರಣೆ ಮಾಡಿದೇನೆ ಎಂದರು.
ವರದಿ: ರಾಜು ಮುಂಡೆ

