LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

IPL ಟ್ರೋಫಿ ಗೆದ್ದ ಆರ್.ಸಿ.ಬಿ:  ವಡಾ-ಪಾವ ವಿತರಿಸಿದ ಅಭಿಮಾನಿ

Advertisement
ಚಿಕ್ಕೋಡಿ: ಆರ್.ಸಿ.ಬಿ ಹಾಗೂ ಪಂಜಾಬ ಕಿಂಗ್ಸ್ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಆರ್.ಸಿ.ಬಿ ಗೆದ್ದರೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡುತ್ತೇನೆ ಎಂದಿದ್ದ ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಮಹಾಲಕ್ಷ್ಮೀ ವಡಾ-ಪಾವ ಅಂಗಡಿಯ ಮಾಲಿಕ ನಾಗೇಶ ಮಂಗುಟೆಯವರು ಮಾತು ಕೊಟ್ಟಂತೆ ಉಚಿತವಾಗಿ ವಡಾ-ಪಾವ ವಿತರಿಸುವ ಮೂಲಕ ಆರ್.ಸಿ.ಬಿ ಮೇಲಿನ ಅಭಿಮಾನವನ್ನು ಎತ್ತಿ ತೋರಿಸಿದ್ದಾರೆ.

[video width="848" height="478" mp4="https://bharathvaibhav.com/wp-content/uploads/2025/06/WhatsApp-Video-2025-06-07-at-7.22.10-AM-2.mp4"][/video]

18 ವರ್ಷಗಳ ಬಳಿಕ ಆರ್.ಸಿ.ಬಿ ತಂಡವು ಚೊಚ್ಚಲ ಐಪಿಎಲ್ ಕಪ್ ವನ್ನು ತನ್ನ ಮುಡಿಗೆರಿಸಿಕೊಂಡಿದೆ.ಇದರಿಂದಾಗಿ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ ಆರ.ಸಿ.ಬಿ‌ ಅಭಿಮಾನಿ‌ ನಾಗೇಶ ಮಂಗುಟೆ ತಮ್ಮ ವಡಾ-ಪಾವ ಅಂಗಡಿಯಲ್ಲಿ ಆರ್.ಸಿ.ಬಿ ಗೆದ್ದರೆ ಉಚಿತವಾಗಿ ವಡಾ-ಪಾವ ನೀಡುವುದಾಗಿ ಘೋಷಿಸಿದರು.ಅದರಂತೆ ಆರ್.ಸಿ.ಬಿ ಫೈನಲ್ ನಲ್ಲಿ ಗೆಲವು ಸಾಧಿಸಿದೆ.



ಕೊಟ್ಟ ಮಾತಂತೆ ನಾಗೇಶ ಮಂಗುಟೆಯವರು ಉಚಿತವಾಗಿ ಸಾಯಂಕಾಲ 4-8 ವರೆಗೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡಿದ್ದಾರೆ. 2500 ಜನರಿಗೆ ಉಚಿತವಾಗಿ ವಿತರಣೆ ಮಾಡಿದ್ದಾರೆ.ಜನರು ಸಾಲಿನಲ್ಲಿ ನಿಂತೂ ವಡಾ-ಪಾವ ತಿಂದು ನಾಗೇಶಯವರ ಅಭಿಮಾನವನ್ನು ಹಾಡಿಹೊಗಳಿದ್ದಾರೆ.

ಇದೇ ಸಂಧರ್ಭದಲ್ಲಿ ನಾಗೇಶ ಮಂಗಟೆಯವರು ಮಾತನಾಡಿ ನಾನು ಮೊದಲನಿಂದಲೂ ಆರ್.ಸಿ.ಬಿ ತಂಡದ ಅಭಿಮಾನಿ ರಾಹುಲ್ ದ್ರಾವಿಡ ಹಿಡಿದು ವಿರಾಟ ಕೊಹ್ಲಿಯವರ ಪಕ್ಕಾ ಅಭಿಮಾನಿ ನಾನು‌.ಆರ್.ಸಿ.ಬಿ ಟ್ರೋಫಿ ಗೆದ್ದರೆ ಉಚಿತವಾಗಿ ವಡಾ-ಪಾವ ವಿತರಣೆ ಮಾಡುವದಾಗಿ ಹೇಳಿಕೊಂಡಿದೆ.ಅದರಂತೆ ಇವತ್ತು ಉಚಿತವಾಗಿ ವಡಾ-ಪಾವ ವಿತರಣೆ ಮಾಡಿದೇನೆ ಎಂದರು.

ವರದಿ: ರಾಜು ಮುಂಡೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ