
ಮುಖ್ಯ ಅತಿಥಿ ರೋಟರಿ ಪ್ರಾಂತಪಾಲ ಬಾಗಲಕೊಟೆಯ ಡಾ.ಗಿರೀಶ ಮಾಸೂರಕರ ಮಾತನಾಡಿ ಸಮಾಜದ ಋಣ ತೀರಿಸಲು ರೋಟರಿ ಸಂಸ್ಥೆಯು ದೊಡ್ಡ ವೇದಿಕೆ ಕಲ್ಪಿಸಿದೆ ಏಕೆಂದರೆ ತಂದೆ,ತಾಯಿ,ಗುರು,ಭೂಮಿ ಋಣ ತೀರಿಸಲು ಅಸಾಧ್ಯ ಆದರೆ ಸಮಾಜದ ಋಣ ತೀರಿಸಲು ರೋಟರಿಯಲ್ಲಿ ಸಾಧ್ಯವಿದೆ ಎಂದ ಅವರು ಬಡ ಜನರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ರೈತರಿಗೆ ನೆರವಾಗಲು ಸಾಕಷ್ಟು ಕಾರ್ಯಕ್ರಮಗಳು ರೋಟರಿಯಿಂದ ನೆರವರುತ್ತಿವೆ ಆಥಣೆ ರೋಟರಿ ಸಂಸ್ಥೆ ೨೮ವರ್ಷಗಳಿಂದ ಅತ್ಯಂತ ಸಮಾಜಮುಖಿ ಸೇವೆಯ ಮೂಲಕ ಜಿಲ್ಲೆಗೆ ಹೆಸರುವಾಸಿಯಾಗಿದೆ ಎಂದರು.
ಮಿರಜದ ವೈಧ್ಯೆ ಡಾ.ಮೊನಿಕಾ ಕುಳೋಳ್ಳಿ ಮಾತನಾಡಿ ಪುರುಷರೊಂದಿಗೆ ಇಂದು ಮಹಿಳೆಯರು ಕೂಡ ಇನ್ನರವಿಲ್ ಕ್ಲಬ್ ಮೂಲಕ ಸಮಾಜಸೇವೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಇದರಿಂದ ಧೈರ್ಯ, ಉತ್ಸಾಹ, ಮಾತನಾಡುವ ಕಲೆ ಬೆಳೆಯುತ್ತದೆ ರೋಟರಿ ಕ್ಲಬ್ ಜತೆಗೆ ಉತ್ತಮ ಸಹಕಾರದಿಂದ ಹೆಚ್ಚಿನ ಕಾರ್ಯಗಳು ಆಗಲಿ ಎಂದರು.
ನೂತನ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷರಾಗಿ ಸಚೀನ ದೇಸಾಯಿ, ಕಾರ್ಯದರ್ಶಿಯಾಗಿ ಶೇಖರ ಕೊಲಾರ ಮತ್ತು ಖಜಾಂಚಿಯಾಗಿ ಸಂತೋಷ ಬೊಮ್ಮಣ್ಣನವರ ಪದಗ್ರಹಣ ಮಾಡಿದರೆ ಇನ್ನರವಿಲ್ಲ ಕ್ಲಬ್ ನೂತನ ಅಧ್ಯಕ್ಷೆಯಾಗಿ ಸುನಿತಾ ದೇಸಾಯಿ,ಕಾರ್ಯದರ್ಶಿಯಾಗಿ ಶೋಭಾ ಕೊಲಾರ ಮತ್ತು ಖಜಾಂಚಿಯಾಗಿ ರಶ್ಮಿ ಬೊಮ್ಮಣವರ,ಭಾರತಿ ಕೊರೆ ಪದಗ್ರಹಣ ಮಾಡಿದರು.
ನೂತನ ಸದಸ್ಯರಾಗಿ ಡಾ.ರವಿ ಪಾಂಗಿ,ಡಾ.ಶುಭಂ ಪಾಟೀಲ.ಡಾ.ರಾಹುಲ ಭೋಸಲೆ, ಶ್ರೀಕಾಂತ ಅಥಣಿ, ಪ್ರಭಾಕರ ಹತ್ತಿ,ಆನಂದ ಟೊನಪಿ,ಅಶೋಕ ಹೊಸೂರ, ಮಹೇಶ ಹಿರೇಮಠ ಅವಿನಾಶ ಜಾಧವಸುನಿಲ ಪ್ರವಾರದೇಸಾಯಿ ಸದಸ್ಯತ್ವ ಪಡೆದರು.
ವರದಿ: ರಾಜು ವಾಘಮಾರೆ

