LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Advertisement
ಅಥಣಿ: ಗುರುವಾರ ೧೭ರಂದು ಸಂಜೆ ಇಲ್ಲಿಯ ರಾಯಲ್ ಹಾಲ್‌ದಲ್ಲಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆವಹಿಸಿ ರೋಟರಿ ಸಂಸ್ಥೆಯ ಅಥಣಿಯ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾತನಾಡುತಾ ಇಂದು ಆರೋಗ್ಯದ ಕಾಳಜಿವಹಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಈ ನಿಟ್ಟಿನಲ್ಲಿ ರೋಟರಿ ಸಂಸ್ಥೆಯು ಸಮಾಜಮುಖಿಯಾಗಿ ಅಥಣಿ ತಾಲೂಕಿನಲ್ಲಿ ಕಳೇದ ೨೮ವರ್ಷಗಳಿಂದ ನೂರಾರು ಕಾರ್ಯಕ್ರಮಗಳ ಮೂಲಕ ಎಲ್ಲ ವರ್ಗದ ಜನರಿಗೆ ನೆರವಾಗಿದೆ ಅದರಂತೆ ದಿನದಿಂದ ದಿನಕ್ಕೆ ರೋಗಗಳು ಹೆಚ್ಚಾಗುತ್ತಿವೆ ಹೀಗಾಗಿ ಜನರಿಗೆ ಕಡಿಮೆ ವೆಚ್ಚದಲ್ಲಿ ಡಯಾಲಿಸಿಸ್ ಮಾಡಿಸಿಕೊಳ್ಳುವವರಿಗೆ ಅನುಕೂಲವಾಗಲೆಂದು ರೋಟರಿ ಸಂಸ್ಥೆ ಡಯಾಲಿಸಿಸ್‌ ಸೆಂಟರ ಆರಂಭವಾಗಲಿದೆ ಜ್ಯೋತಿಬಾ ದೇವಸ್ಥಾನದ ಆವರಣದಲ್ಲಿ ರೋಟರಿ ಉದ್ಯಾನವನ ಸ್ಥಾಪಿಸಿ ಅಲ್ಲಿ ಮಕ್ಕಳಿಗೆ ಆಟಿಕೆ ಸಾಮಗ್ರಿಗಳನ್ನ ಅಳವಡಿಸಿ ಉತ್ತಮ ಪರಿಸರ ಜತೆಗೆ ದೇವಸ್ಥಾನಕ್ಕೆ ಬರುವ ಭಕ್ತರಿಗೆ ನೆಮ್ಮದಿ,ಸಮಾಧಾನ ದೊರೆಯುವಂತೆ ಸಸಿಗಳನ್ನ ನೆಡಲಾಗಿದೆ ಎಂದರು.



ಮುಖ್ಯ ಅತಿಥಿ ರೋಟರಿ ಪ್ರಾಂತಪಾಲ ಬಾಗಲಕೊಟೆಯ ಡಾ.ಗಿರೀಶ ಮಾಸೂರಕರ ಮಾತನಾಡಿ ಸಮಾಜದ ಋಣ ತೀರಿಸಲು ರೋಟರಿ ಸಂಸ್ಥೆಯು ದೊಡ್ಡ ವೇದಿಕೆ ಕಲ್ಪಿಸಿದೆ ಏಕೆಂದರೆ ತಂದೆ,ತಾಯಿ,ಗುರು,ಭೂಮಿ ಋಣ ತೀರಿಸಲು ಅಸಾಧ್ಯ ಆದರೆ ಸಮಾಜದ ಋಣ ತೀರಿಸಲು ರೋಟರಿಯಲ್ಲಿ ಸಾಧ್ಯವಿದೆ ಎಂದ ಅವರು ಬಡ ಜನರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ, ರೈತರಿಗೆ ನೆರವಾಗಲು ಸಾಕಷ್ಟು ಕಾರ್ಯಕ್ರಮಗಳು ರೋಟರಿಯಿಂದ ನೆರವರುತ್ತಿವೆ ಆಥಣೆ ರೋಟರಿ ಸಂಸ್ಥೆ ೨೮ವರ್ಷಗಳಿಂದ ಅತ್ಯಂತ ಸಮಾಜಮುಖಿ ಸೇವೆಯ ಮೂಲಕ ಜಿಲ್ಲೆಗೆ ಹೆಸರುವಾಸಿಯಾಗಿದೆ ಎಂದರು.

ಮಿರಜದ ವೈಧ್ಯೆ ಡಾ.ಮೊನಿಕಾ ಕುಳೋಳ್ಳಿ ಮಾತನಾಡಿ ಪುರುಷರೊಂದಿಗೆ ಇಂದು ಮಹಿಳೆಯರು ಕೂಡ ಇನ್ನರವಿಲ್ ಕ್ಲಬ್ ಮೂಲಕ ಸಮಾಜಸೇವೆಗೆ ಮುಂದಾಗಿರುವುದು ಹೆಮ್ಮೆಯ ಸಂಗತಿ ಇದರಿಂದ ಧೈರ್ಯ, ಉತ್ಸಾಹ, ಮಾತನಾಡುವ ಕಲೆ ಬೆಳೆಯುತ್ತದೆ ರೋಟರಿ ಕ್ಲಬ್‌ ಜತೆಗೆ ಉತ್ತಮ ಸಹಕಾರದಿಂದ ಹೆಚ್ಚಿನ ಕಾರ್ಯಗಳು ಆಗಲಿ ಎಂದರು.

ನೂತನ ಪದಾಧಿಕಾರಿಗಳ ಪದಗ್ರಹಣ: ಅಧ್ಯಕ್ಷರಾಗಿ ಸಚೀನ ದೇಸಾಯಿ, ಕಾರ್ಯದರ್ಶಿಯಾಗಿ ಶೇಖರ ಕೊಲಾರ ಮತ್ತು ಖಜಾಂಚಿಯಾಗಿ ಸಂತೋಷ ಬೊಮ್ಮಣ್ಣನವರ ಪದಗ್ರಹಣ ಮಾಡಿದರೆ ಇನ್ನರವಿಲ್ಲ ಕ್ಲಬ್ ನೂತನ ಅಧ್ಯಕ್ಷೆಯಾಗಿ ಸುನಿತಾ ದೇಸಾಯಿ,ಕಾರ್ಯದರ್ಶಿಯಾಗಿ ಶೋಭಾ ಕೊಲಾರ ಮತ್ತು ಖಜಾಂಚಿಯಾಗಿ ರಶ್ಮಿ ಬೊಮ್ಮಣವರ,ಭಾರತಿ ಕೊರೆ ಪದಗ್ರಹಣ ಮಾಡಿದರು.

ನೂತನ ಸದಸ್ಯರಾಗಿ ಡಾ.ರವಿ ಪಾಂಗಿ,ಡಾ.ಶುಭಂ ಪಾಟೀಲ.ಡಾ.ರಾಹುಲ ಭೋಸಲೆ, ಶ್ರೀಕಾಂತ ಅಥಣಿ, ಪ್ರಭಾಕರ ಹತ್ತಿ,ಆನಂದ ಟೊನಪಿ,ಅಶೋಕ ಹೊಸೂರ, ಮಹೇಶ ಹಿರೇಮಠ ಅವಿನಾಶ ಜಾಧವಸುನಿಲ ಪ್ರವಾರದೇಸಾಯಿ ಸದಸ್ಯತ್ವ ಪಡೆದರು.

ವರದಿ: ರಾಜು ವಾಘಮಾರೆ
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ