ಸೇಡಂ:ತಾಲೂಕಿನ ಖಂಡೇರಾಯಣಪಲ್ಲಿ ಗ್ರಾಮದಲ್ಲಿ ಪೂಜಾರಿ ಗುರುಕುಲ ಶಾಲೆಯಲ್ಲಿ ಸೋಮವಾರ ದಿನಾಂಕ 29ರಂದು ತಾಯಿ ಮಹಾಸರಸ್ವತಿ ಪೂಜೆ ಮತ್ತು ಎಲ್ ಕೆ ಜಿ ಮತ್ತು ಯು ಕೆ ಜಿ ಮಕ್ಕಳ ಅಕ್ಷರಭ್ಯಾಸ ಕಾರ್ಯಕ್ರಮವನ್ನು ಚಂದ್ರಶೇಖರ ಸ್ವಾಮಿ ಮಠ ಅವರ ನೇತೃತ್ವದಲ್ಲಿ ನಡೆಸಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷರಾದಂತಹ ಅಶೋಕ್ ಪೂಜಾರಿ ಮತ್ತು ಮುಖ್ಯೋಪಾಧ್ಯಾಯರು ಸಾವಿತ್ರಮ್ಮ ಕಾವಲಿ ಹಾಗೂ ಶಿಕ್ಷಕಿಯರಾದ ರೇಣುಕಾ, ಸಮತ, ಮಹೇಶ್ವರಿ, ದೀಕ್ಷ ಮತ್ತು ಪಾಲಕರು ಉಪಸ್ಥಿತಿ ಇದ್ದರು.


