ಸಿಂಧನೂರು: ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಒಳಗೊಂಡಂತೆ ಅಸ್ಪೃಶ್ಯತೆ ತಾಲೂಕಿನಲ್ಲಿ ಇನ್ನು ಜೀವಂತವಾಗಿದೆ, ದೌರ್ಜನ್ಯ ದಬ್ಬಾಳಿಕೆ ನಡೆದಾಗ ಜಾತಿ ನಿಂದನೆ ಕೇಸ್ ದಾಖಲು ಮಾಡಿದರೆ, ಅದಕ್ಕೆ ಕೌಂಟರ್ ಪ್ರಕರಣಗಳು ಹೆಚ್ಚಾಗುತ್ತಿದೆ ಹೊರತು ದಲಿತರ ಮೇಲೆ ದೌರ್ಜನ್ಯ ದಬ್ಬಾಳವಿಕೆ ನಿಲ್ಲುತ್ತಿಲ್ಲ ಎಂದು ದಲಿತ ಮುಖಂಡರು ಹೇಳಿದರು .
ನಗರದ ಪೋಲಿಸ್ ಠಾಣೆಯಲ್ಲಿ ಎಸ್ಸಿ-ಎಸ್ಟಿ ಕುಂದು- ಕೊರತೆ ಸಭೆಯನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಅರುಣಾಂಶುಗಿರಿ ರವರ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ನಗರ ಪೊಲೀಸ್ ಠಾಣೆ ಆವರಣದಲ್ಲಿ ಸಭೆ ಕರೆಯಲಾಗಿತ್ತು.
ಈ ಸಭೆಯಲ್ಲಿ ಅನೇಕ ದಲಿತ ಹಿರಿಯ ಮತ್ತು ಯುವ ಮುಖಂಡರು ಭಾಗವಹಿಸಿ ಮಾತನಾಡಿ, ನಗರ ಹಾಗೂ ಗ್ರಾಮೀಣ ಭಾಗದಲ್ಲಿ ದಲಿತರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ಹಾಗೂ ಅಸ್ಪೃಶ್ಯತೆ ಕುರಿತು ಸುಧೀರ್ಘವಾಗಿ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಸ್ವತಂತ್ರ ಬಂದು 75 ವರ್ಷಗಳು ಗತಿಸಿದರು ಕೂಡ ಇನ್ನು ಜಾತಿ ತಾರತಮ್ಯ ನಿಂತಿಲ್ಲ ಜೊತೆಗೆ ಅಸ್ಪೃಶ್ಯತೆ ನಿವಾರಣೆಗಾಗಿ ಹಾಗೂ ದಲಿತರ ಮೇಲೆ ನಡೆಯುವ ದೌರ್ಜನ್ಯ ದಬ್ಬಾಳಿಕೆ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರಗಳು ಹಲವು ಕಾರ್ಯಕ್ರಮ ಜಾರಿ ತಂದಿದ್ದು ಆದರೆ ಇವುಗಳನ್ನು ಸರಿಯಾಗಿ ರೀತಿಯಲ್ಲಿ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುಂದಾಗಿದೆ ಎಸ್ಸಿ -ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಕೇಸು ದಾಖಲಾದರೆ ಕೌಂಟರ್ ಕೇಸ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ : ಡಿವೈಎಸ್ಪಿ, ಚಂದ್ರಶೇಖರ್ ಜಿ. ಸಿಪಿಐ,ವಿನಾಯಕ. ಪಿ ಐ, ವಿರಾರೆಡ್ಡಿ ಸೇರಿದಂತೆ ದಲಿತ ಮುಖಂಡರಾದ : ಎಚ್ ಎನ್. ಬಡಿಗೇರ್. ಅಶೋಕ್ ಉಮಾಲೂಟಿ. ಹನುಮಂತ ಕರ್ನಿ. ವೀರೇಶ್ ಸಿದ್ರಾಮಪುರ. ಶಿವರಾಜ್ ಉಪ್ಪಲದೊಡ್ಡಿ. ಬಸವರಾಜ ತಿಡಿಗೋಳ. ಹನುಮಂತ ಗೋಮರ್ಸಿ. ಸಂಗಮೇಶ್ ಮುಳ್ಳೂರು. ಪಂಪಾಪತಿ ಬೂದಿವಾಳ. ಲಕ್ಷ್ಮಣ ಬೋವಿ. ದುರ್ಗೇಶ್ ಬಾಲಿ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ


