ನಂತರ ಮಾತನಾಡಿ ಬೇಸಿಗೆಯ ಸಂದರ್ಭದಲ್ಲಿ ನೀರಿನ ದಾಹ ನೀಗಿಸುವುದು ಒಂದು ಪುಣ್ಯದ ಕಾರ್ಯವಾಗಿದೆ.
ಅಂತಹ ಕಾರ್ಯವನ್ನು ವಿಷ್ಣು ವಿಲಾಸ ಸಹಕಾರಿಯು ಹಲವು ವರ್ಷಗಳಿಂದ ಅರವಟಿಗೆಯನ್ನು ಆರಂಭಿಸಿ ದೂರದ ಊರುಗಳಿಂದ ತಾಲೂಕು ಕೇಂದ್ರಗಳಿಗೆ ಬರುವ ಗ್ರಾಮಸ್ಥರಿಗೆ, ರಸ್ತೆಬದಿಯಲ್ಲಿನ ಬಡ ವ್ಯಾಪಾರಿಗಳಿಗೆ, ವಾಹನ ಚಾಲಕರಿಗೆ ದಾಹವನ್ನು ನೀಗಿಸುತ್ತಲೇ ಬಂದಿದ್ದಾರೆ.

ಇವರ ಸಮಾಜಮುಖಿ ಕಾರ್ಯಗಳಿಗೆ ಭಗವಂತ ಇನ್ನಷ್ಟು ಶಕ್ತಿಯನ್ನು ನೀಡಲಿ. ಅದೇ ರೀತಿ ಎಲ್ಲರೂ ತಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿ ಪಕ್ಷಿಗಳಿಗೆ ನೀರಿನ ದಾಹ ನೀಗಿಸಲು ಮುಂದಾಗಬೇಕೆಂದು ತಿಳಿಸಿದರು.
ಸಹಕಾರಿ ಅಧ್ಯಕ್ಷರಾದ ಹೆಚ್.ಜೆ.ಹನುಮಂತಯ್ಯ ಅವರು ಮಾತನಾಡಿ ನಮ್ಮ ಸಹಕಾರಿಯ ಎಲ್ಲಾ ಪದಾಧಿಕಾರಿಗಳು, ನಿರ್ದೇಶಕರು ಹಾಗೂ ಸಿಬ್ಬಂದಿಗಳ ನೆರವಿನೊಂದಿಗೆ ಪ್ರತಿವರ್ಷ ಬೇಸಿಗೆಯಲ್ಲಿ ಅರವಟಿಗೆಯನ್ನು ಪ್ರಾರಂಭಿಸಿ ನೀರಿನ ದಾಹವನ್ನು ತಣಿಸುವ ಪ್ರಯತ್ನವನ್ನು ಮಾಡುತ್ತಾ ಬಂದಿದ್ದೇವೆ.ವಿಶೇಷ ದಿನಗಳಲ್ಲಿ ಮಜ್ಜಿಗೆ ವಿತರಣೆ ಮಾಡಲಾಗುವುದು.
ಇನ್ನಿತರ ದಿನಗಳಲ್ಲಿ ಅಂದರೆ ಮಳೆಗಾಲದವರೆಗೂ ಸಾರ್ವಜನಿಕರಿಗೆ ಶುದ್ದ ಕುಡಿಯುವ ನೀರನ್ನು ವಿತರಿಸುತ್ತಾ ಬಂದಿದ್ದೇವೆ ಎಂದರು.
ಇದೇ ವೇಳೆ ಬಲಕುಂದಿ ಶ್ರೀ ಬನ್ನಿಮಹಾಂಕಾಳಿ ಸೌಹಾರ್ಧ ಪತ್ತಿನ ಸಹಕಾರಿ ಅಧ್ಯಕ್ಷ ಚಿಂತಕುಂಟೆ ಗಾದಿಲಿಂಗನಗೌಡ, ಶ್ರೀ ವಿಷ್ಣು ವಿಲಾಸ ಸಹಕಾರಿ ನಿರ್ದೇಶಕರಾದ ಜೆ.ಶ್ರೀರಾಮ, ಎಮ್.ಬದ್ರಿನಾಥ, ಕೆ.ಆರ್.ನಾಗರಾಜಶೆಟ್ಟಿ, ಕೆ.ಸೂರ್ಯಪ್ರಕಾಶ, ಎ.ಸಂತೋಷ, ಕಾರ್ಯನಿರ್ವಾಹಕ ಅನಿಲ್ಕುಮಾರ್ ಹಾಗೂ ಸಿರಿ ಮಹಾಲಕ್ಷ್ಮಿ ಸೌಹಾರ್ಧ ಪತ್ತಿನ ಸಹಕಾರಿ ನಿರ್ದೇಶಕ ರಾಘವೇಂದ್ರ ಆಚಾರ್, ಸೇರಿದಂತೆ ಸಿಬ್ಬಂದಿಗಳು ಇದ್ದರು.
ವರದಿ : ಶ್ರೀನಿವಾಸ ನಾಯ್ಕ

