Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಗುರು ಆರೂಢರ 117ನೇ ಜಯಂತೋತ್ಸವ

Advertisement
ಬಸವನಬಾಗೇವಾಡಿ: ತಾಲ್ಲೂಕಿನ ಸುಕ್ಷೇತ್ರ ಆರೂಢನಂದಿಹಾಳದ ಶ್ರೀ ಗುರು ಆರೂಢರ 117 ನೇ ಜಯಂತೋತ್ಸವ ಅಂಗವಾಗಿ ತೊಟ್ಟಿಲೋತ್ಸವ ಬುಧುವಾರ ಸಂಭ್ರಮದಿಂದ ಜರುಗಿತು. ಆರೂಢರ ಮಂಟಪಕ್ಕೆ ಹೂವಿನ ಅಲಂಕಾರ, ಅಭಿಷೇಕ ಹಾಗೂ ಪೂಜೆ ಸಲ್ಲಿಸಲಾಯಿತು. ನಂತರ ಹೂಗಳಿಂದ ಅಲಂಕರಿಸಿದ ತೊಟ್ಟಿಲಲ್ಲಿ ಆರೂಢರ ಮೂರ್ತಿ ಪ್ರತಿಷ್ಠಾಪನೆ ಮಾಡಿ ತೊಟ್ಟಿಲೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ ಕೊಟ್ಟರು.ಅಕ್ಕನ ಬಳಗದ ಸದಸ್ಯರು ಜೋಗುಳ ಪದ ಹಾಡಿ ಸಂಭ್ರಮಿಸಿದರು. ನಂತರ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಶ್ರೀ ಮಠದ ಅಧ್ಯಕ್ಷ ಶ್ರೀಶೈಲ ಕನ್ನೂರ ಮಾತನಾಡಿ, 1908 ರಲ್ಲಿ ಈ ಲೋಕಕ್ಕೆ ಆರೂಢರು ಲೋಕ ಉದ್ದಾರಕ್ಕೆ ಈ ಪುಟ್ಟ ಹಳ್ಳಿಯಲ್ಲಿ ಉದಯಿಸಿದರು. ಶರೀರ ರಕ್ಷಣೆಗಿಂತ ನಿಜವಾದ ಜ್ಞಾನ ಮುಖ್ಯ. ಶರೀರ ಹಾಗೂ ಅಧಿಕಾರ ನಂಬಿ ಕೆಡಬೇಡಿ. ಆರೂಢರ ಶಕ್ತಿ ಅಪಾರವಾಗಿದೆ. ಬೇಡಿದವರ ಕಾಮಧೇನು ಆಗಿದ್ದಾರೆ. ವರುಣ ದೇವ, ಉದ್ದಾದಕ ಮುನಿ, ಅಷ್ಟಾವಕ್ರ ಸೇರಿದಂತೆ ಅನೇಕ ಶರಣರ ಕತೆಗಳ ಮೂಲಕ ಆರೂಢರನ್ನು ಪರಿಚಯಿಸಿದರು.

ಆರೂಢರ ಗ್ರಂಥ ಓದಿ ಪವಿತ್ರರಾಗಿರಿ. ಗರ್ಭಿಣಿಯರು ಇಂತಹ ಶರಣರ ಜೀವನವನ್ನು ಪಠಿಸಿದ್ದಲ್ಲಿ ಉತ್ತಮ ಸಂಸ್ಕಾರಯುತ ಮಕ್ಕಳು ಜನಿಸಲು ಸಾಧ್ಯ ಎಂದರು. ಈ ಸಂದರ್ಭದಲ್ಲಿ ಬಮ್ಮಯ್ಯ ಹಿರೇಮಠ, ಶ್ರೀಶೈಲ ಕನ್ನೂರ, ಗುರುನಾಥ ಸಜ್ಜನ, ಬಸಯ್ಯ ಹಿರೇಮಠ, ನಿಂಗಪ್ಪ ಮದರಿ, ರಾಚಪ್ಪ ಕನ್ನೂರ, ಬಸಣ್ಣ ಕನ್ನೂರ, ಶಾಂತಪ್ಪ ಕನ್ನೂರ, ಬಸಲಿಂಗಮ್ಮ,,ಸಂಗಮ್ಮ, ಈರಮ್ಮ ಅಂಗಡಿ,ಮೈತ್ರಾ ಕನ್ನೂರ, ಸಚಿನ್, ವನಜಾಕ್ಸಿ,ಸೌಜನ್ಯ, ಶ್ರುತಿ ಸೇರಿದಂತೆ ಅನೇಕ ಕಡೆಗಳಿಂದ ಆಗಮಿಸಿದ್ದ ಭಕ್ತರು ಹಾಗೂ ಶಿಷ್ಯ ವರ್ಗದವರು ಉಪಸ್ಥಿತರಿದ್ದರು.

ವರದಿ: ಗುರುರಾಜ್. ಬ. ಕನ್ನೂರ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ