
ಕಾರ್ಯಕ್ರಮದಲ್ಲಿ ದೇಣಿಗೆ ನೀಡಿದ ಎಲ್ಲ ದಾನಿಗಳಿಗೆ ಇಲಾಖೆಯ ಪರವಾಗಿ ಧನ್ಯವಾದ ಸಲ್ಲಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿದ ಎಲ್ಲ ಸ್ಪರ್ದಾಳುಗಳಿಗೆ ಶುಭವಾಗಲಿ ಮತ್ತು ಎಲ್ಲರಿಗೂ ಒಳಿತಾಗಲಿ ಎಂದರು.ದೇಣಿಗೆ ನೀಡಿದ ಮಹನೀಯರನ್ನು ಗೌರವಿಸಲಾಯಿತು.

ಸಮಾರಂಭದ ದಿವ್ಯಸಾನಿಧ್ಯ ವಹಿಸಿದ ಶ್ರೀಗಳು ಆಶೀರ್ವಚನ ನೀಡಿ ಮಕ್ಕಳು ಆಟದ ನಿಯಮಗಳಿಗೆ ಬದ್ದರಾಗಿ ಆಟಗಳನ್ನು ಆಡಿ ಕ್ರಿಡಾಕೂಟ ಯಶಸ್ವಿಗೊಳಿಸಬೇಕು ಎಂದು ನುಡಿದರು.
ಕಾರ್ಯಕ್ರಮದ ವೇದಿಕೆಯಲ್ಲಿಎಸ್ ಎಲ್ ಗರಡಿಮನಿ, ಎಸ್ ಟಿ ಹಳ್ಳಿಕೇರಿ, ಎಂ ಎಸ್ ಮೇಟಿ, ತಂಗೆವ್ವ ಕಿಲಬನೂರ, ಮತ್ತು ಗ್ರಾ ಪಂ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು, ವಲಯದ ಎಲ್ಲ ಮುಖ್ಯೋಪಾಧ್ಯಾಯರು, ದೈಹಿಕ ಶಿಕ್ಷಕರು ಸಹ ಶಿಕ್ಷಕರು ಉಪಸ್ಥಿತರಿದ್ದರು.

ಶಿಕ್ಷಕಿಯರು ರೇಣುಕಾ ಬಂತಿ ನಿರೂಪಿಸಿದರು, ಸರೋಜಿನಿ ಕೀಲಿಪುಟ್ಟಿ ಸ್ವಾಗತಿಸಿದರು, ವಿನಾಯಕ ಶೆಟ್ಟಿ ಮಾಲಾರ್ಪಣೆ ನಡೆಸಿದರು, ಬಸವರಾಜ ರೋಣದ ವಂದಿಸಿದರು.
ವರದಿ: ಕುಮಾರ ಎಂ

