ಚಿಕ್ಕೋಡಿ :ಹಾಸ್ಟೆಲ್ ವಾರ್ಡನ್ನ ಹಲ್ಲೆಯಿಂದಾಗಿ ನಮ್ಮ ಮಗನ ಸಾವಾಗಿದೆ ಎಂದು ಕುಟುಂಬಸ್ಥರ ಆರೋಪ.ಸುಟ್ಟಟ್ಟಿ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿ ಘಟನೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮ. ಗೌತಮ ಹಣಮಂತ ಭಜಂತ್ರಿ(15) ಸಾವನ್ನಪ್ಪಿರುವ ವಿದ್ಯಾರ್ಥಿ. ಮೃತ ಗೌತಮ ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ವಿದ್ಯಾರ್ಥಿ.
ಮೃತ ಗೌತಮ ಒಂಬತ್ತನೇಯ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿದ್ದ ವಿದ್ಯಾರ್ಥಿ.ಮೃತ ಗೌತಮನ ಬೆನ್ನ ಮೇಲೆ ಹಾಗೂ ಕುಂಡಿಯ ಮೇಲೆ ಬಾಸುಂಡೆಗಳು ಪತ್ತೆ. ಸಂಜೆ ಸಮಯ ಏಳು ಗಂಟೆಗೆ ಸಾವನ್ನಪ್ಪಿರುವ ವಿದ್ಯಾರ್ಥಿ ಗೌತಮ.ಮನೆಯವರಿಗೂ ತಿಳಿಸದೇ ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿರುವ ವಸತಿ ನಿಲಯದ ಸಿಬ್ಬಂದಿ.ವಸತಿ ನಿಲಯದಲ್ಲಿ ವಿದ್ಯಾರ್ಥಿ ನೇಣು ಹಾಕಿಕೊಂಡಿದ್ದಾನೆಂದು ಪಾಲಕರಿಗೆ ತಿಳಿಸಿದ್ದ ವಸತಿ ನಿಲಯದ ಸಿಬ್ಬಂದಿ.
ಇದೇ ಗುರುವಾರ ಮೃತ ಗೌತಮ ಆತನ ಅಕ್ಕನ ಮದುವೆಗೆ ಹಾಜರಾಗಿ ವಸತಿ ನಿಲಯಕ್ಕೆ ತೆರಳಿದ್ದನಂತೆ.ಹಾಸ್ಟೆಲ್ ವಾರ್ಡನ್ ಹಲ್ಲೆಯಿಂದಾಗಿ ನಮ್ಮ ಮಗ ಗೌತಮ ಮೃತಪಟ್ಟಿದ್ದಾನೆಂದು ಕುಟುಂಬಸ್ಥರ ಆರೋಪ. ರಾಯಬಾಗ ಸಾರ್ವಜನಿಕ ಆಸ್ಪತ್ರೆಗೆ ಎದುರುಗಡೆ ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ.ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.
ವರದಿ :ರಾಜು ಮುಂಡೆ


