LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
International News

ಟ್ರಂಪ್ ಪುತ್ರನ ಹತ್ಯೆಗೈದರೇ 95 ಕೋಟಿ ರೂ. ಬಹುಮಾನ : ಇರಾನ್ ಘೋಷಣೆ

Advertisement

ಇರಾನ್‌ : ಅಮೆರಿಕ (US) ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಕುಟುಂಬಕ್ಕೆ ಇರಾನ್‌ನಿಂದ(Iran) ಅಸಾಧಾರಣ ಹಾಗೂ ಕಳವಳಕಾರಿ ಜೀವ ಬೆದರಿಕೆ ಎದುರಾಗಿದೆ.

 ಇರಾನ್ ಸರ್ಕಾರಿ ಟೆಲಿವಿಷನ್‌ನ ಚಾನೆಲ್ 3 ರಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಡೊನಾಲ್ಡ್ ಟ್ರಂಪ್ ಅವರ 20 ವರ್ಷದ ಪುತ್ರ ಬ್ಯಾರನ್ ಟ್ರಂಪ್ ಅವರನ್ನು ತಲುಪುವ ಮಾರ್ಗಗಳನ್ನು ಸವಿವರವಾಗಿ ಪ್ರಸ್ತುತಪಡಿಸಲಾಗಿದ್ದು, ಅವರ ಹತ್ಯೆಗೆ ಸುಮಾರು 95 ಕೋಟಿ ರೂಪಾಯಿಗೂ ಹೆಚ್ಚು (10 ಮಿಲಿಯನ್ ಡಾಲರ್) ಬಹುಮಾನವನ್ನು ಘೋಷಿಸಲಾಗಿದೆ.

ಇರಾನ್‌ನ ರೆವಲ್ಯೂಷನರಿ ಗಾರ್ಡ್ ಕ್ರಾಪ್ಸ್ (IRGC) ಸಂಯೋಜಿತ ಮಾಧ್ಯಮ ಸಂಸ್ಥೆಗಳು ಬಿಡುಗಡೆ ಮಾಡಿರುವ ಈ ವೀಡಿಯೊಗೆ "ಬ್ಯಾರನ್ ಟ್ರಂಪ್‌ನನ್ನು ಎಲ್ಲಿ ಕೊಲ್ಲಬೇಕು" ಎಂಬ ಶೀರ್ಷಿಕೆ ನೀಡಲಾಗಿದೆ. ಪ್ರಸಾರವಾದ ಈ ಕ್ಲಿಪ್‌ನಲ್ಲಿ ಬ್ಯಾರನ್ ಅವರ ದಿನನಿತ್ಯದ ಚಲನವಲನಗಳನ್ನು ವಿವರವಾಗಿ ವಿವರಿಸಿ ಚಿತ್ರಿಸಲಾಗಿದೆ.

ಬ್ಯಾರನ್ ಅವರ ಪ್ರತಿಯೊಂದು ನಡೆಯನ್ನು ಸಂಪೂರ್ಣವಾಗಿ ಕಣ್ಣಿಟ್ಟು ನಿಗಾವಹಿಸಲಾಗುತ್ತಿದೆ ಎಂದು ವೀಡಿಯೊದಲ್ಲಿ ಪ್ರತಿಪಾದಿಸಲಾಗಿದೆ. ಅಷ್ಟೇ ಅಲ್ಲದೆ, ಅಮೆರಿಕದ ಅತ್ಯಂತ ಭದ್ರತಾ ಸಂಸ್ಥೆಯಾದ ಸಿಪಾಯಿಗಳು ಅಥವಾ ಸಿಕ್ರೆಟ್ ಸರ್ವೀಸ್ ಭದ್ರತಾ ವಲಯವನ್ನು ಭೇದಿಸಿ, ಯುವತಿಯೊಬ್ಬಳು ಖಾಸಗಿ ಸಭೆಯೊಂದರಲ್ಲಿ ಬ್ಯಾರನ್ ಪಕ್ಕದಲ್ಲೇ ಕುಳಿತಿದ್ದಳು ಎಂದು ವೀಡಿಯೊ ಪ್ರತಿಪಾದಿಸಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಿಶ್ವದಲ್ಲೇ ಮೊದಲು IVF ಮೂಲಕ ಜನಿಸಿದ ಲಖಿಮಿ ತಳಿಯ ಹೆಣ್ಣು ಕರು ಟ್ರಂಪ್ ಪುತ್ರನ ಹತ್ಯೆಗೈದರೇ 95 ಕೋಟಿ ರೂ. ಬಹುಮಾನ : ಇರಾನ್ ಘೋಷಣೆ106 ತಾಲೂಕುಗಳು ಬರಪೀಡಿತ, ಮುಂದಿನ ಸಂಪುಟ ಸಭೆಯಲ್ಲಿ ಘೋಷಣೆ : ಜಿ ಪರಮೇಶ್ವರ್ಆ.27 ರಿಂದ ಗುರುರಾಯರ 355ನೇ ಆರಾಧನಾ ಮಹೋತ್ಸವ  : 7 ದಿನಗಳ ಕಾಲ ಸಂಭ್ರಮ ವಿಶ್ವಕಪ್ ಹಾಕಿ ಪಂದ್ಯಾವಳಿಯಿಂದ ಭಾರತ ನಿರ್ಗಮನ 3 ದಿನ ಮೊದಲೇ ವಿಧಾನಸಭೆ, ವಿಧಾನಪರಿಷತ್ ಕಲಾಪ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಶವಂತಪುರ ಕ್ಷೇತ್ರದಲ್ಲಿ ಗ್ಯಾರಂಟಿ ಯೋಜನೆ ಸಮಿತಿ  ಕಚೇರಿ ಉದ್ಘಾಟನೆ: ಶಾಸಕ ಎಸ್ ಟಿ ಸೋಮಶೇಖರ್ ತೆಕ್ಕಲಕೋಟೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ವತಿಯಿಂದ ತರಬೇತಿ ಕಾರ್ಯಾಗಾರವಿದ್ಯಾರ್ಥಿನಿಯರೊಂದಿಗೆ ಅನುಚಿತ ವರ್ತನೆ,  ಉಪನ್ಯಾಸಕ ಚಂದ್ರಶೇಖರ್ ಅಮಾನತ್ತಿಗೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆಭಿಕ್ಷೆ ಬೇಡುತ್ತಿದ್ದ ಅಜ್ಜಿ ಸಾವು : ಮನೆಯಲ್ಲಿ ಸಿಕ್ಕಿತು ಬರೋಬ್ಬರಿ 30 ಲಕ್ಷ!