LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

 ಅಧಿಕಾರಿಗಳ ಬೇಜವಾಬ್ದಾರಿಗೆ ಸಾರ್ವಜನಿಕರ ಆಕ್ರೋಶದ ಬೆಂಕಿ!

Advertisement

ಪಾವಗಡದಲ್ಲಿ ಸರ್ಕಾರಿ ನಿಯಮಕ್ಕೆ ಎಳ್ಳುನೀರು

ಅಧಿಕಾರಿಗಳೇ ಎಚ್ಚರ! ನಿಗದಿತ ಸಮಯ ಮೀರಿದರೂ ಶುರುವಾಗದ 'ಪ್ರಜಾಸೇವೆ ಅಭಿಯಾನ': ಅರ್ಜಿ ಹಿಡಿದು ಕಾದ ಕಾದ ಜನರು ಮನೆಗೆ ವಾಪಸ್!

​ಪಾವಗಡ : ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ನಾಗಲಮಡಿಕೆ ಹೋಬಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ.

 'ಪ್ರಜಾಸೇವೆ ಅಭಿಯಾನ' ಸಭೆಯಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. 

 

ಸರ್ಕಾರಿ ನಿಯಮಾವಳಿಗಳ ಪ್ರಕಾರ ಬೆಳಿಗ್ಗೆ 10:00 ಗಂಟೆಗೆ ಪ್ರಾರಂಭವಾಗಬೇಕಿದ್ದ ಸಭೆ, ಸಮಯ 11:50 ದಾಟಿದರೂ ಇನ್ನು ಆರಂಭಗೊಳ್ಳದೆ

 ಅಧಿಕಾರಿಗಳ ಸೈಲೆಂಟ್ ನಿರ್ಲಕ್ಷ್ಯಕ್ಕೆ ಕನ್ನಡಿ ಹಿಡಿದಿದೆ.

​ಜನರ ಗೋಳು: ತಮ್ಮ ಕುಂದುಕೊರತೆಗಳ ಅರ್ಜಿ ಹಿಡಿದು ದೂರದ ಊರುಗಳಿಂದ ಆಸೆಯಿಂದ ಬಂದಿದ್ದ ಸಾರ್ವಜನಿಕರು ಹಾಗೂ ರೈತರು, ಘಂಟೆಗಟ್ಟಲೆ ಕಾಯ್ದು ಕಾಯ್ದು ಬೇಸತ್ತು ಮನೆ ಕಡೆಗೆ ಕಾಲ್ನಡಿಗೆ ಬೆಳೆಸುವ ದುಸ್ಥಿತಿ ನಿರ್ಮಾಣವಾಗಿದೆ.

​ಸಮಯ ಪಾಲನೆ ಎಲ್ಲಿ:
 ಸಾರ್ವಜನಿಕರ ಸೇವೆಯೇ ಪರಮೋಚ್ಚ ಧರ್ಮ ಎಂದು ಭಾಷಣ ಬಿಗಿಯುವ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಮಯದ ಪ್ರಜ್ಞೆಯೂ ಇಲ್ಲವೇ.

 ನಿಯಮ ರೂಪಿಸುವ ಸರ್ಕಾರಿ ಅಧಿಕಾರಿಗಳೇ ಈ ರೀತಿ ಉಡಾಫೆ ತೋರಿದರೆ ಬಡಜನರ ಸಂಕಷ್ಟ ಕೇಳುವವರು ಯಾರು.
​ತಕ್ಷಣದ ಎಚ್ಚರಿಕೆ:

 ಈ ಕೂಡಲೇ ಸಂಬಂಧಪಟ್ಟ ಉನ್ನತಾಧಿಕಾರಿಗಳು ಹಾಗೂ ಜಿಲ್ಲಾಡಳಿತ ನಿದ್ರೆಯಿಂದ ಎದ್ದು, ನಾಗಲಮಡಿಕೆ ಹೋಬಳಿಯ ಸಭೆಗೆ ಗೈರಾದ ಮತ್ತು ವಿಳಂಬ ಧೋರಣೆ ತೋರಿದ ಅಧಿಕಾರಿಗಳ ವಿರುದ್ಧ ಖಡಕ್ ಶಿಸ್ತುಕ್ರಮ ಜರುಗಿಸಬೇಕು.

 ಇಲ್ಲವಾದಲ್ಲಿ ಸಾರ್ವಜನಿಕರ ಈ ಆಕ್ರೋಶದ ಬೆಂಕಿ ಮುಂದೆ ದೊಡ್ಡ ಮಟ್ಟದ ಹೋರಾಟವಾಗಿ ಸಿಡಿಯುವುದು ಖಚಿತ!

ವರದಿ : ಶಿವಾನಂದ 

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬ್ರಿಕ್ಸ್ ಸಹಕಾರದ ಎರಡು ದಶಕಗಳ ನೆನಪಿನ ವಿಶೇಷ ಅಂಚೆ ಚೀಟಿಗಳ ಬಿಡುಗಡೆ ಸಿಎಂ ಖಡಕ್ ಸೂಚನೆ ಬೆನ್ನಲ್ಲೇ ರಾಜ್ಯಾದ್ಯಂತ 800 ಬಾಲ ಕಾರ್ಮಿಕರ ರಕ್ಷಣೆಗ್ರಾಮೀಣ ಭಾಗದಲ್ಲೂ ತಜ್ಞ ವೈದ್ಯರ ಸೇವೆ ಕಲ್ಪಿಸಲು ಮಹತ್ವದ ಕ್ರಮ: ಆಸ್ಪತ್ರೆಗಳ ದತ್ತು ನೀಡಲು ಸರ್ಕಾರ ನಿರ್ಧಾರ ಬಿಜೆಪಿ ಅಧಿಕಾರಕ್ಕೆ ಬರುವುದು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಬಿ. ವೈ ವಿಜಯೇಂದ್ರಗಮನ ಸೆಳೆದ ಜಗದೀಶ್ ಶೆಟ್ಟರ್-ರಮೇಶ್ ಜಾರಕಿಹೊಳಿ, ಲಖನ್ ಭೇಟಿ ಇಂಗ್ಲೆಂಡ್ ಕ್ರಿಕೆಟ್ ತಂಡಕ್ಕೆ 8 ವಿಕೆಟ್ ಗಳ ಜಯವಂದೇ ಮಾತರಂ ಗೀತೆ ಮೊಟಕು ವಿವಾದ: ಸೆ.15ರಿಂದ ಮತ್ತೊಂದು ಪಾದಯಾತ್ರೆ ಘೋಷಿಸಿದ ಬಿಜೆಪಿ ಇ.ಡಿಗೆ ನೇರ ಸವಾಲು ಹಾಕಿದ ಸಚಿವ ಸತೀಶ್ ಜಾರಕಿಹೊಳಿದ. ಅಪ್ರಿಕಾ-ನಮಿಬಿಯಾ 3 ನೇ ಏಕದಿನ ಪಂದ್ಯ ನಾಳೆ ರೈತ ಕುಟುಂಬಕ್ಕೆ ₹5 ಲಕ್ಷ ಪರಿಹಾರ ನೀಡಲು ಪ್ರಕಾಶ್ ಖಂಡ್ರೆ ಆಗ್ರಹ