ಧಾರವಾಡ: ಆಫ್ರಿಕಾದ ಚಿನ್ನದ ಗಣಿಗಾರಿಕೆ ಉದ್ಯಮದಲ್ಲಿ ಶೇ. 40ರಷ್ಟು ಪಾಲು ಹೊಂದಿದ್ದಾರೆಂಬ ಜಾರಿ ನಿರ್ದೇಶನಾಲಯದ ಆರೋಪವನ್ನು ಸಚಿವ ಸತೀಶ್ ಜಾರಕಿಹೊಳಿ ತೀವ್ರವಾಗಿ ತಿರಸ್ಕರಿಸಿದ್ದಾರೆ.
ತನಿಖಾ ದಳದ ಬಳಿ ಗಟ್ಟಿಯಾದ ಪುರಾವೆಗಳಿದ್ದರೆ ಮೊದಲು ಅವುಗಳನ್ನು ಸಾಬೀತುಪಡಿಸಲಿ ಎಂದು ಅವರು ಬಹಿರಂಗ ಸವಾಲು ಹಾಕಿದ್ದಾರೆ.
ಬೆಂಗಳೂರಿನ ತಮ್ಮ ವಸತಿ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಇಡಿ ಪ್ರಕಟಿಸಿರುವ ಅಧಿಕೃತ ಟಿಪ್ಪಣಿಯಲ್ಲಿ ಎಲ್ಲವೂ ಕೇವಲ ಅನುಮಾನ'ದ ಹಂತದಲ್ಲಿದೆಯೇ ವಿನಃ ಯಾವುದೇ ಅಂತಿಮ ತೀರ್ಮಾನಕ್ಕೆ ಬಂದಿಲ್ಲ ಎಂದರು. ಮೊದಲು ತಮಗೆ ಅಧಿಕೃತ ನೋಟಿಸ್ ತಲುಪಿಸಲಿ ಮತ್ತು ತಮ್ಮ ಬಳಿಯಿರುವ ಕಡತಗಳನ್ನು ತೋರಿಸಲಿ, ತಾವೂ ಕೂಡ ಸಮರ್ಥನೆಗಾಗಿ ಎಲ್ಲಾ ದಾಖಲೆಗಳನ್ನು ಮುಂದಿಡುವುದಾಗಿ ತಿಳಿಸಿದರು.


