Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಒಂದೇ ದಿನ 10 ಸಾವಿರ ಇಳಿಕೆ ಕಂಡ ಚಿನ್ನದ ದರ. 

Advertisement

ಬೆಂಗಳೂರು : ಭಾರತೀಯ ಮಾರುಕಟ್ಟೆಯಲ್ಲಿ ಬುಧವಾರ ಹಳದಿ ಮತ್ತು ಬಿಳಿ ಲೋಹದ ಖರೀದಿದಾರರ ಜೇಬಿಗೆ ಭರ್ಜರಿ ಬಂಪರ್ ಉಳಿತಾಯವಾಗಿದೆ. 

ನಿನ್ನೆ (ಮಂಗಳವಾರ) ಇದ್ದಕ್ಕಿದ್ದಂತೆ ಏರಿಕೆ ಕಂಡಿದ್ದ ಚಿನ್ನದ ದರ ಇಂದು ಬುಧವಾರ ದೇಶಾದ್ಯಂತ ಭಾರಿ ಕುಸಿತವನ್ನು ಕಂಡಿದೆ.

ಇನ್ನು ಚಿನ್ನಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಬೆಳ್ಳಿ ಬೆಲೆಯು ಅಕ್ಷರಶಃ ಪಾತಾಳಕ್ಕೆ ಕುಸಿದಿದ್ದು, ಗ್ರಾಹಕರಿಗೆ ಮಾರುಕಟ್ಟೆಯಲ್ಲಿ ಬಂಗಾರದಂತಹ ಅವಕಾಶ ಸಿಕ್ಕಂತಾಗಿದೆ. 

ಜಾಗತಿಕ ಮಾರುಕಟ್ಟೆಯ ಏರಿಳಿತದ ಬೆನ್ನಲ್ಲೇ ಭಾರತೀಯ ಮಾರುಕಟ್ಟೆಯಲ್ಲೂ ಚಿನ್ನದ ದರ ಒಂದು ಗ್ರಾಮ್‌ಗೆ ಬರೋಬ್ಬರಿ 395 ರೂಪಾಯಿಯಿಂದ 450 ರೂಪಾಯಿವರೆಗೆ ಭಾರಿ ಇಳಿಕೆಯಾಗಿದೆ.

ಬೆಂಗಳೂರಿನಲ್ಲಿ ಇಂದಿನ ಚಿನ್ನದ ಅಸಲಿ ದರ ಎಷ್ಟು?

ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ದೇಶದಲ್ಲಿ ಆಭರಣ ಚಿನ್ನದ ಬೆಲೆ 14,000 ರೂಪಾಯಿ ಗಡಿಯೊಳಗೆ ಬಂದರೆ, ಅಪರಂಜಿ ಚಿನ್ನದ ಬೆಲೆ 15,000 ರೂಪಾಯಿಗಿಂತ ಕೆಳಗೆ ಇಳಿದು ಗ್ರಾಹಕರಿಗೆ ನೆಮ್ಮದಿ ತಂದಿದೆ.

22 ಕ್ಯಾರಟ್ ಆಭರಣ ಚಿನ್ನ (10 ಗ್ರಾಮ್): ₹1,36,450 ರೂಪಾಯಿ

24 ಕ್ಯಾರಟ್ ಅಪರಂಜಿ ಚಿನ್ನ (10 ಗ್ರಾಮ್): ₹1,48,860 ರೂಪಾಯಿ

ಬಿಳಿ ಲೋಹಕ್ಕೆ ಭಾರಿ ಪೆಟ್ಟು ಕೆಜಿಗೆ ₹10,000 ಅಗ್ಗವಾದ ಬೆಳ್ಳಿ

ಮಂಗಳವಾರ ಮಾರುಕಟ್ಟೆಯಲ್ಲಿ ಸಖತ್ ಸ್ಥಿರವಾಗಿದ್ದ ಬಿಳಿ ಲೋಹ ಬೆಳ್ಳಿ ಬೆಲೆಯು, ಇಂದು ಬುಧವಾರ ಅತಿ ದೊಡ್ಡ ಕುಸಿತವನ್ನು ಎದುರಿಸಿದೆ. 

ಒಂದು ಗ್ರಾಮ್‌ಗೆ ಬರೋಬ್ಬರಿ 10 ರೂಪಾಯಿ ತಗ್ಗಿದ್ದು, ಕೆಜಿಗೆ ಒಟ್ಟಾರೆಯಾಗಿ 10,000 ರೂಪಾಯಿ ಇಳಿಕೆಯಾಗಿದೆ. 

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು ₹1,48,860

ನಾಗ್ಪುರ ₹1,48,860

ಮುಂಬೈ ₹1,48,860

ಚೆನ್ನೈ ₹1,50,550

ಕೋಲ್ಕತ್ತಾ ₹1,48,860

ಪಾಟ್ನಾ ₹1,48,910

ಸೂರತ್‌ ₹1,48,910

ಚಂಡೀಗಢ ₹1,49,010

ಲಕ್ನೋ ₹1,49,010

 

 

 

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ದೀರ್ಘಕಾಲದ ಚುನಾಯಿತ ಪ್ರಧಾನಿಯಾಗಿ ದಾಖಲೆ : ಸಂಪುಟ ಸಭೆಯಲ್ಲಿ ಎದ್ದು ನಿಂತ ಗೌರವ ಗ್ಯಾರೆಂಟಿ ಯೋಜನೆ ಅಧ್ಯಕ್ಷರಿಂದ ನ್ಯಾಯಬೆಲೆ ಅಂಗಡಿಯ ಮಾಲೀಕರ ಸಭೆಒಂದೇ ದಿನ 10 ಸಾವಿರ ಇಳಿಕೆ ಕಂಡ ಚಿನ್ನದ ದರ. 15 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ ರಾಜ್ಯ ಸರ್ಕಾರ ಅನುಮೋದನೆ ಬೆಳಗಾವಿಯಲ್ಲಿ ಮದುವೆಯಾದ ಒಂದೇ ತಿಂಗಳಲ್ಲೇ ಉಡುಪಿ ಮೂಲದ ವಿವಾಹಿತೆ ಆತ್ಮಹತ್ಯೆ ಬಾಗಲಕೋಟೆ ನಗರದಲ್ಲಿ ನರೇಂದ್ರ ಮೋದಿ 12 ವರ್ಷ ಪೂರೈಸಿದಕ್ಕೆ ಬಿಜೆಪಿ ನಾಯಕರು ವಿವಿಧಡೆ ವಿಶೇಷ ಪೂಜೆ   ಅಪ್ರಾಪ್ತ ಬಾಲಕನಿಗೆ ಸಿಗರೇಟ್ ಸೇದಿಸಿ ಬ್ಲ್ಯಾಕ್ ಮೇಲ್ : 120 ಗ್ರಾಂ ಬಂಗಾರ ದೋಚಿದ ಖದೀಮರು ಅರೆಸ್ಟ್ ಕೈಕಾಲು ಹಿಡಿದ ಇತಿಹಾಸ ಆರ್‌ಎಸ್‌ಎಸ್‌ಗೆ ಇದೆ : ಪ್ರಿಯಾಂಕ್ ಖರ್ಗೆ ವಿದ್ಯಾನಿಕೇತನ ಶಾಲೆಯಲ್ಲಿ ಪರಿಸರ ದಿನಾಚರಣೆಉರಿ ಸೆಕ್ಟರ್‌ನಲ್ಲಿ ಗ್ರೆನೇಡ್ ಆಕಸ್ಮಿಕ ಸ್ಫೋಟ : ಇಬ್ಬರು ಯೋಧರು ಸಾವು