LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ : ಇದರ ಬಗ್ಗೆ ತಿಳಿಯಿರಿ.

Advertisement
Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು ಸ್ವಲ್ಪ ಖಾರ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಇಷ್ಟಪಡುತ್ತಾರೆ. ಇನ್ನು ಕೆಲವರು ಮಾತ್ರ ಸಿಹಿ ಆಹಾರ ಪದಾರ್ಥಗಳನ್ನು ತಿನ್ನುತ್ತಾರೆ. ಯಾವುದು ಹೆಚ್ಚು ಆರೋಗ್ಯಕರ ಗೊತ್ತಾ? ಅದುವೆ ಮೊದಲು ಹೇಳಿದ ಕಹಿಯ ಆಹಾರ ಪದಾರ್ಥಗಳು. 1. ಹಾಗಲಕಾಯಿ
ಹಾಗಲಕಾಯಿ ತಿನ್ನಲು ಕಹಿ ಆಗಿದ್ದರೂ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ. ಹೌದು, ಹಾಗಲಕಾಯಿ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಜೊತೆಗೆ, ಇದು ತೂಕವನ್ನು ಕಡಿಮೆ ಮಾಡಲು ಮತ್ತು ದೃಷ್ಟಿ ಸುಧಾರಿಸಲು ಸಹ ಸಹಾಯ ಮಾಡುತ್ತದೆ. ಹಾಗಲಕಾಯಿಯನ್ನು ತರಕಾರಿ, ಸೂಪ್ ಅಥವಾ ರಸದ ರೂಪದಲ್ಲಿ ಬಳಸಬಹುದು. ಇದರ ಉಪ್ಪಿನಕಾಯಿಯನ್ನು ಸಹ ತಯಾರಿಸಬಹುದು.

2. ಮೆಂತ್ಯ ಬೀಜ
ಮಂತ್ರ ಬೀಜಗಳು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು, ದೇಹದಲ್ಲಿನ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಮಂತ್ರ ಬೀಜಗಳನ್ನು ತರಕಾರಿಗಳು, | ಬೇಳೆ ಅಥವಾ ಸೂಪ್‌ನಲ್ಲಿ ಬಳಸಬಹುದು. ಮೆಂತ್ಯ ಬೀಜಗಳ ಪುಡಿಯನ್ನು ಸಹ ತಯಾರಿಸಬಹುದು, ಇದನ್ನು ನೀರಿನಲ್ಲಿ ಬೆರೆಸಿ ಸೇವಿಸಬಹುದು.

3.ಬೇವಿನ ಎಲೆ
ಬೇವಿನ ಮರು ಬರಿ ನೆರಳಿಗಷ್ಟೇ ಸೀಮಿತವಲ್ಲ. ಅದು ನೆರಳು ಕೂಡುವುದರ ಜತೆ ಔಷಧಿ ಗುಣಗಳಿಂದ ತುಂಬಿದ. ಬೇವಿನ ಎಲೆಗಳು, ತೊಗಟೆ, ಬೀಜಗಳು ಎಲ್ಲವೂ ಆರೋಗ್ಯಕ್ಕೆ ಪ್ರಯೋಜನಕಾರಿ. ಚರ್ಮ ರೋಗಗಳು, ದಂತ ಸಮಸ್ಯೆಗಳು, ಮಧುಮೇಹ ಮತ್ತು ಇತರ ಕಾಯಿಲೆಗಳಿಗೆ ಬೇವನ್ನು ಬಳಸಲಾಗುತ್ತದೆ. ಬೇವು ಬಾರಿಯಾ ವಿರೋಧಿ, ಶಿಲೀಂಧ್ರನಾಶಕ ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಇದು ದೇಹವನ್ನು ಆರೋಗ್ಯವಾಗಿಡಲು ಸಹಾಯ
ಮಾಡುತ್ತದೆ.

4.ಕ್ಯಾನ್‌ಬೆರಿ
ಕ್ಯಾನ್‌ಬೆರಿಗಳು ಕಹಿ, ಹುಳಿ ಮತ್ತು ರುಚಿಯಲ್ಲಿ ತುಂಬಾ ಹುಳಿಯಾಗಿರುತ್ತವೆ. ಆದರೆ ಅವು ಹೊಟ್ಟೆಯ ಸಮಸ್ಯೆಗಳನ್ನು
ನಿವಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸುಧಾರಿಸುತ್ತದೆ.

5.ವಿನಗ‌
ಸೇಬಿನ ಸಿಹಿಯಿಂದಾಗಿ ರುಚಿ ಚೆನ್ನಾಗಿದ್ದರೂ, ಅದರ ವಿನೆಗರ್ ರುಚಿಯಲ್ಲಿ ಕಹಿ ಮತ್ತು ಖಾರವಾಗಿರುತ್ತದೆ. ಸೇಬಿನ ವಿನೆಗರ್‌ನಲ್ಲಿರುವ ಅಂಶಗಳು ಜೀರ್ಣಕ್ರಿಯೆಯನ್ನು ಸುಧಾರಿಸಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.(ಏಜೆನ್ಸಿಸ್)
Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಎಚ್.ಕೆ. ಪಾಟೀಲ್ ರಿಗೆ ಸಿಗದ ಸಚಿವ ಸ್ಥಾನ : 21 ಕಾಂಗ್ರೆಸ್ ಸದಸ್ಯರ ಸಾಮೂಹಿಕ ರಾಜೀನಾಮೆಆರೋಗ್ಯ ಇಲಾಖೆಯಿಂದ 'ಋತುತಾರೆ' ಯೋಜನೆ ಜಾರಿ, ರಮ್ಯಾ ರಾಯಭಾರಿ ಅಪಘಾನಿಸ್ತಾನ-ಐರ್ಯಲೆಂಡ್ ಮೊದಲ ಏಕದಿನ ನಾಳೆಸ್ಪಿನ್ ಬೌಲಿಂಗ್ ಎದುರಿಸಿ ನೆಟ್ಸ್ನಲ್ಲಿ ಬೆವರು ಸುರಿಸುತ್ತಿರುವ ರಾಹುಲ್, ಜೈಸ್ವಾಲ್ಶ್ರೀ ದತ್ತ ಇಂಡಿಯಾ ಪ್ರೈ.ಲಿ. ಹಾವಿನಾಳ ಕಾರ್ಖಾನೆಗೆ ಕಬ್ಬು ನುರಿಸಲು ಕಳುಹಿಸಿರುವ ರೈತರಿಗೆ ಸಕ್ಕರೆ ವಿತರಣೆ ಬೀದರ್ ಜಿಲ್ಲೆ ಬರಪೀಡಿತ ಘೋಷಿಸಲು ಆಗ್ರಹಬಸ್ ಹತ್ತಲು ಬಂದ ಭಿಕ್ಷುಕನಿಗೆ ಕಾಲಿನಿಂದ ಒದ್ದ ಕಂಡಕ್ಟರ್ ಸಿಎಂ ಫೋನ್ ಮಾಡಿ ರಾಜೀನಾಮೆ ಕೇಳಿದ್ದಾರೆ, ನನಗೆ ನೋವಾಗಿದೆ : ಹೊರಟ್ಟಿ ತೀವ್ರ ಬೇಸರಮಾಜಿ ರಾಜ್ಯಪಾಲ, ಪದ್ಮಶ್ರೀ ಪುರಸ್ಕೃತ ಶಿಕ್ಷಣ ತಜ್ಞ ಡಿ.ವೈ.ಪಾಟೀಲ್ ವಿಧಿವಶ ಭಾರತ ತಂಡಕ್ಕೆ ಶ್ರೀಲಂಕಾ ಪ್ರವಾಸ ಮಹತ್ವದ್ದು: ಆಕಾಶ್ ಚೋಪ್ರಾ