
ಅಂಗಡಿಯ ಮಾಲೀಕ ವಿನಾಯಕ ವಿಜಯಕುಮಾರ ಮಾಳಿ ಸದಲಗಾ ಪೊಲೀಸರಿಗೆ ದೂರು ನೀಡಿದ್ದಾರೆ. ಡಿಎಸ್ಪಿ ಗೋಪಾಲಕೃಷ್ಣ ಗೌಡರ, ಸಿಪಿಐ ವಿಶ್ವನಾಥ್ ಚೌಗಲಾ, ಸದಲಗಾ ಪಿಎಸ್ಐ ಶಿವಕುಮಾರ್ ಬಿರಾದಾರ. ಮಾರ್ಗದರ್ಶನದಲ್ಲಿ
ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಸ್ಥಳಕ್ಕೆ ಕರೆಸಿ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಳ್ಳರು 8 ಲಕ್ಷ ರೂ. ಮೌಲ್ಯದ 9 ಕೆಜಿ ಬೆಳ್ಳಿ ಆಭರಣ ಮತ್ತು 16,000 ರೂ. ನಗದು ಕದ್ದಿದ್ದಾರೆ.ಅದಲ್ಲದೇ ಬುಧ್ಧ ವಿಹಾರ ಮುಂಭಾಗದಲ್ಲಿದ್ದ 2 ದ್ವಿಚಕ್ರ ಬೈಕಗಳನ್ನು ಕದಿದ್ದಾರೆ ಎಂದು ತಿಳಿದು ಬಂದಿದೆ.

ಚನ್ನಮ್ಮ ವೃತ್ತ ಮತ್ತು ಮಹಾಲಿಂಗಸ್ವಾಮಿ ಶಾಲೆಯ ನಡುವಿನ ರಸ್ತೆಯಲ್ಲಿರುವ ದೀಪಸ್ತಂಭಗಳನ್ನು ರಸ್ತೆ ನವೀಕರಣಕ್ಕಾಗಿ ಸಿಸಿ ಕ್ಯಾಮೇರಾ ತಗೆಯಲಾಗಿದೆ.ಚನ್ನಮ್ಮ ವೃತ್ತದಲ್ಲಿರುವ ಹೈಮಾಸ್ಟ್ ದೀಪವನ್ನು ಕಳೆದ ಎರಡು-ಮೂರು ದಿನಗಳಿಂದ ಆಫ ಆಗಿರುವುದರಿಂದ ಕಳ್ಳರು ಕತ್ತಲೆಯ ಲಾಭವನ್ನು ಪಡೆದುಕೊಂಡಿದ್ದಾರೆ.
ಖಾಸಗಿ ಸಿಸಿಟಿವಿಯಲ್ಲಿ ಕಳ್ಳರ ಓಡಾಟ ದೃಶ್ಯ ಸೆರೆಯಾಗಿದೆ.ಈ ದೃಶ್ಯಗಳನ್ನು ಆಧರಿಸಿ ಕಳ್ಳರ ಪತ್ತೆಗಾಗಿ ಬಲೆಬಿಸಿದ್ದಾರೆ.
ವರದಿ: ರಾಜು ಮುಂಡೆ

