ಮೊದಲ ಬಾರಿಗೆ 1973 ರಲ್ಲಿ ಆಯೋಜಿಸಲಾಯಿತು, ಇದು ಸಮುದ್ರ ಮಾಲಿನ್ಯ, ಅಧಿಕ ಜನಸಂಖ್ಯೆ, ಜಾಗತಿಕ ತಾಪಮಾನ ಏರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ವನ್ಯಜೀವಿ ಅಪರಾಧಗಳಂತಹ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ವೇದಿಕೆಯಾಗಿದೆ.

ಯುನಿಟ್ ಹೆಡ್ ಸುಬ್ಬುರತ್ನಂ ಮಾತನಾಡಿ ವಿಶ್ವ ಪರಿಸರ ದಿನಾಚರಣೆಯು ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವತ್ತ ಗಮನ ಹರಿಸಲಿದೆ ದಶಕಗಳಿಂದ, ಪ್ಲಾಸ್ಟಿಕ್ ಮಾಲಿನ್ಯವು ಪ್ರಪಂಚದ ಮೂಲೆ ಮೂಲೆಗೂ ನುಸುಳಿದೆ, ನಾವು ಕುಡಿಯುವ ನೀರು, ನಾವು ತಿನ್ನುವ ಆಹಾರ ಮತ್ತು ನಮ್ಮ ದೇಹಗಳನ್ನು ಸೇರುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯವು ಒಂದು ಪ್ರಮುಖ ಕಾಳಜಿಯಾಗಿದ್ದರೂ, ಇದು ಇಂದಿನ ಪರಿಸರ ಸವಾಲುಗಳಲ್ಲಿ ಅತ್ಯಂತ ಸರಿಪಡಿಸಬಹುದಾದ ಒಂದಾಗಿದೆ, ಇದಕ್ಕೆ ಕೆಲವು ಸ್ಪಷ್ಟ ಪರಿಹಾರಗಳು ಕೈಯಲ್ಲಿವೆ ಎಂದು ಮಾತನಾಡಿದರು.
ಈ ಸಂದರ್ಭದಲ್ಲಿ ಯೂನಿಟ್ ಹೆಡ್ ಸುಬ್ಬರತ್ನಂ, ಕೇನ್ ಮ್ಯಾನೇಜರ್ ಅನಿರುದ್ಧ ಪಾಟೀಲ,ಕೇನ್ ಡೆವಲಪ್ಮೆಂಟ್ ಆಫೀಸರ್ ರವೀಂದ್ರ ಬಿರಾದಾರ, ಎಚ್ ಆರ್ ಮ್ಯಾನೇಜರ್ ಹತ್ತೂರ ಸರ್, ಎಲೆಕ್ಟ್ರಿಕಲ್ ಮ್ಯಾನೇಜರ್ ಸುದರ್ಶನ್ ಕೌಜಲಗಿ, ಮತ್ತು ಕಾರ್ಖಾನೆಯ ಎಲ್ಲ ಸಿಬ್ಬಂದಿ ವರ್ಗದವರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು.
ವರದಿ: ಉಮಾಶಂಕರ್ ಕ್ಷೆತ್ರ

