ತುಮಕೂರು : ಜಿಲ್ಲೆಗೆ ನೂತನ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷರಾಗಿ ಪಾವಗಡ ಶಾಸಕ ಹೆಚ್ ವಿ ವೆಂಕಟೇಶ್ ಆಯ್ಕೆಯಾಗಿದ್ದಕ್ಕೆ ರಾಷ್ಟ್ರೀಯ ಕಿಸಾನ್ ಸಂಘದ ರಾಜ ಉಪಾಧ್ಯಕ್ಷ ಜೈ ಶಂಕರ್ ರೆಡ್ಡಿ ಅವರಿಂದ ಸನ್ಮಾನ
ದಿನಾಂಕ, 11/02/25 ಮಂಗಳವಾರ ತುಮಕೂರಿನಲ್ಲಿರುವ ಗೃಹ ಕಚೇರಿಯಲ್ಲಿ ಹಾಲು ಉತ್ಪಾದಕರ ಒಕ್ಕೂಟ ಜಿಲ್ಲಾ ಅಧ್ಯಕ್ಷ ಹಾಗೂ ಪಾವಗಡ ತಾಲ್ಲೂಕಿನ ಶಾಸಕ ಹೆಚ್ ವಿ ವೆಂಕಟೇಶ್ ಅವರನ್ನು ರಾಷ್ಟ್ರೀಯ ಕಿಸಾನ್ ಸಂಘ ರಾಜ್ಯ ಉಪಾಧ್ಯಕ್ಷರು ಜೈ ಶಂಕರ್ ರೆಡ್ಡಿ ಬೇಟೆ ನೀಡಿ ಈ ವೇಳೆಯಲ್ಲಿ ತುಮಕೂರು ಜಿಲ್ಲೆಯ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆಗಿದ್ದಕ್ಕೆ ಬಿ ಕೆ ಹಳ್ಳಿ ಗ್ರಾಮದ ವಾಸಿಯಾದ ಜೈ ಶಂಕರ್ ರೆಡ್ಡಿ ಶಾಸಕ ವೆಂಕಟೇಶ್ ಅವರಿಗೆ ಸಿಹಿ ಹಂಚಿ ಹೂವಿನ ಹಾರಗಳ ಮುಖಾಂತರ ಮತ್ತು ಸನ್ಮಾನ ಮಾಡಿರುತ್ತಾರೆ ಇದೆ ಸಂದರ್ಭದಲ್ಲಿ ಶಾಸಕರು ಹತ್ತಿರ ರಾಷ್ಟ್ರೀಯ ಕಿಸಾನ್ ಸಂಘ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಜೈ ಶಂಕರ್ ರೆಡ್ಡಿ ಮಾತನಾಡಿ ನಮ್ಮ ಬಿಕೆಹಳ್ಳಿ ಗ್ರಾಮ ಗಡಿ ಭಾಗದಲ್ಲಿ ಇರುತ್ತದೆ ಅದಕ್ಕೆ ನಮ್ಮ ಬಿ ಕೆ ಹಳ್ಳಿ ಗ್ರಾಮ ಹಿಂದುಳಿದ ಗ್ರಾಮ ಆಗಿದ್ದಕ್ಕೆ ಹೆಚ್ಚಿನ ದಾಗಿ ಅಭಿವೃದ್ಧಿ ಮಾಡಿಸಿ ನಂತರ ಬಿಕೆಹಳ್ಳಿ ಗ್ರಾಮ ದಿಂದ ಆಂಧ್ರಪ್ರದೇಶದ ಅನಂತಪುರ ಜಿಲ್ಲೆ ಈ ಮಾರ್ಗವಾಗಿ ರಸ್ತೆ ಇರುತ್ತದೆ ಈ ರಸ್ತೆಯಲ್ಲಿ ಪಾವಗಡ ತಾಲೂಕಿನಿಂದ ಹೆಚ್ಚಿನದಾಗಿ ಸಾರ್ವಜನಿಕರು ಸಂಚಾರ ಮಾಡುತ್ತಾರೆ ಆದರೆ ನಮ್ಮ ಬಿ ಕೆ ಹಳ್ಳಿ ಗ್ರಾಮ ಪಂಚಾಯಿತಿಯಿಂದ ಆಂಧ್ರದ ಗಡಿ ಭಾಗದವರೆಗೆ ರಸ್ತೆ ಹದ್ದಿಗೆಟ್ಟಿರುತ್ತದೆ ಸರಿಯಾಗಿ ರಸ್ತೆ ಇರುವುದಿಲ್ಲ ಅದಕ್ಕೆ ಸಾರ್ವಜನಿಕರಿಗೆ ಸಂಚಾರ ಮಾಡುವುದಕ್ಕೆ ಆಗುತ್ತಿಲ್ಲ ಅದಕ್ಕೆ ನೀವು ಆ ರಸ್ತೆಯನ್ನು ಯಾವುದಾದರೂ ಒಂದು ಅನುದಾನದಲ್ಲಿ ರಸ್ತೆಯನ್ನು ಸರಿ ಮಾಡಿಸಬೇಕಾಗಿ ಎಂದು ಹೇಳಿ ನಂತರ ಬಿ ಕೆ ಹಳ್ಳಿ ಗ್ರಾಮದಲ್ಲಿರುವ ಕಾಮನದುರ್ಗ ಬೆಟ್ಟ ಇರುತ್ತದೆ ಈ ಬೆಟ್ಟದಲ್ಲಿ ಪ್ರಸಿದ್ಧವಾದ ಶ್ರೀ ರಾಮ ದೇವಸ್ಥಾನ ಇರುತ್ತದೆ ಸುಮಾರು ಭಕ್ತಾದಿಗಳು ಅಕ್ಕ ಪಕ್ಕದ ಹಳ್ಳಿಗಳಿಂದ ಬೆಟ್ಟದ ಮೇಲೆ ಇರುವ ದೇವಸ್ಥಾನಕ್ಕೆ ಪಾದಯಾತ್ರ ಮೂಲಕ ಭಕ್ತಾದಿಗಳು ಹೋಗಿ ಪೂಜೆಯನ್ನು ಮಾಡಿಕೊಂಡು ಬರುತ್ತಿದ್ದಾರೆ ನಂತರ ಪ್ರತಿ ವರ್ಷ ಕಾಮನ್ ದುರ್ಗ ಬೆಟ್ಟದ ಮೇಲೆ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಜಾತ್ರೆ ಆಗುತ್ತದೆ ಅದಕ್ಕೆ ಭಕ್ತಾದಿಗಳಿಗೆ ಬಿಕೆಹಳ್ಳಿ ಗ್ರಾಮದಿಂದ ಕಾಮನ್ ದುರ್ಗ ಬೆಟ್ಟದ ಮೇಲೆ ಇರುವ ದೇವಸ್ಥಾನಕ್ಕೆ ಸಂಚಾರ ಮಾಡುವುದಕ್ಕೆ ರಸ್ತೆಯನ್ನು ಮಾಡಿ ಬೇಕೆಂದು ಭಕ್ತಾದಿಗಳಿಗೆ ಅನುಕೂಲವಾಗುತ್ತದೆಂದು ಜೈ ಶಂಕರ್ ರೆಡ್ಡಿ ಶಾಸಕರ ಹತ್ತಿರ ಹಂಚಿಕೊಂಡಿರುತ್ತಾರೆ.
ವರದಿ : ಶಿವಾನಂದ