ಸುರಪುರ: ತಾಲೂಕಿನ ದೇವಿಕೇರಾ ಗ್ರಾಮದ ಪಿ ಎಂ ಶ್ರೀ ಶಾಲೆಗೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸತೀಶ್ ಎಚ್ ಎಸ್ ಬೇಟಿ ನೀಡಿ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಕೆಲ ಕಾಲ ವಿದ್ಯಾಭ್ಯಾಸದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದರು ವಿದ್ಯಾರ್ಥಿಗಳು ಗ್ರಾಮ ಪಂಚಾಯಿತಿ ಗ್ರಂಥಾಲಯವನ್ನು ಸದಾ ಕಾಲ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕಿವಿಮಾತು ಹೇಳಿ ಅದಾದ ನಂತರ ಎಲ್ಲಾ ತರಗತಿಯ ಮಕ್ಕಳಿಗೆ ವಿಷಯವಾರು ಪ್ರಶ್ನೆಗಳು ಕೇಳಿ ಅತಿ ಹೆಚ್ಚು ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿ ಮನೆ ಮತ್ತು ಶಾಲೆಯಲ್ಲಿ ಸಹಿತ ನಿರಂತರ ಅಧ್ಯಯನ ಆದಾಗ ಮಾತ್ರ ತಾವುಗಳು ಉನ್ನತ ಫಲಿತಾಂಶ ನಿರೀಕ್ಷಿಸಬಹುದು ಅದೇ ರೀತಿ ಉತ್ತಮ ಶಿಕ್ಷಕ ವೃಂದ ತಮ್ಮ ಶಾಲೆಯಲ್ಲಿ ಇದೆ ಇದನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು ಅದೇ ರೀತಿ ಶಾಲೆಯ ಬಿಸಿ ಊಟ ಬಗ್ಗೆ ವಿಚಾರಿಸಿದರು ಇದೇ ವೇಳೆ ಶಾಲೆಯ ಮುಖ್ಯ ಗುರುಗಳಾದ ಶ್ರೀ ಆರ್ ಕೆ ಕೋಡಿಹಾಳ ಹಾಗು ಶಿಕ್ಷಕರಾದ ಭೀಮಶೆಪ್ಪ ಇನ್ನತರ ಶಿಕ್ಷಕರು ಹಾಜರಿದ್ದರು.
ವರದಿ : ರಾಜು ಮುಂಡೆ