ಸೇಡಂ : ತಾಲೂಕಿನ ಅಳ್ಳೊಳ್ಳಿ ಮತ್ತು ಕಲಕಂಭ ಗ್ರಾಮದ ಸ್ಥಳೀಯರಿಗೆ ಉದ್ಯೋಗ ನೀಡುತ್ತೇವೆ ಎಂದು ಸುಳ್ಳು ಭರವಸೆ ನೀಡಿ ಅನ್ಯಾಯ ಮಾಡುತ್ತಿರುವ ಸೋಲಾರ ಕಂಪನಿಯ ವಿರುದ್ಧ ದಿ.೧೧/೦೨/೨೦೨೫ರಂದು ಗ್ರಾಮಸ್ಥರು ಪ್ರತಿಭಟನೆ ಮತ್ತು ಧರಣಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಶಿವಕುಮಾರ ಪಾಟೀಲ್ ತೇಲ್ಕೂರ, ಗ್ರಾಮ ಪಂಚಾಯತ್ ಸದಸ್ಯರಾದ ಮಹಾವೀರ ಅಳ್ಳೊಳ್ಳಿಕರ್, ಸಿದ್ದು ಭಾನರ್ ಕೊಡ್ಲಾ, ವೆಂಕಟೇಶ್ ಪಾಟೀಲ್, ಕರಬಸ್ಸು ಬಿರಾದಾರ, ಸಿದ್ದು ಕೋದಂಪುರ, ಶರಣಪ್ಪ ತೇಲ್ಕೂರ, ಜಗದೇವಪ್ಪ ನಾಚವಾರ, ರವಿ ಸಿಂದನಮಡು, ಶಿವು ಹಳ್ಳಿ, ತಿರುಪತಿ ಮದಕಲ್, ಮುನೀಂದ್ರ ಅಳ್ಳೊಳ್ಳಿ, ಸಾಬಣ್ಣ ಕಲಕಂಭ, ಸಿದ್ದು ಊಡಗಿ, ರಾಜು ಕಟ್ಟಿ, ಲಕ್ಷ್ಮಣ್ ಮಂತ್ರಿ, ಬಲವಂತ ರೆಡ್ಡಿ, ಸುನಿಲ್ ಹಳ್ಳಿ, ಬಾಲರಾಜ್ ಕೊಡ್ಲಾ, ಸಿದ್ದು ಶೆಟ್ಟಿ, ನಾಗಣ್ಣ ಮಾಲಿ ಪಾಟೀಲ್, ಬಸವರಾಜ ಉಡಗಿ ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಗ್ರಾಮಸ್ಥರು ಭಾಗಿಯಾಗಿದ್ದರು.
ಇದೇ ಸಮಯದಲ್ಲಿ ಕಂಪನಿಯ ಡಿ ಎಂ ಮನಮಿತ್ ಸಿಂಗ ಅವರಿಗೆ ಮನವಿ ಸ್ಪಂದಿಸಿ ಒಂದು ವಾರದಲ್ಲಿ ಸ್ಥಳೀಯರ ಸಮಸ್ಯೆಗಳು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು ಈ ಕಾರಣದಿಂದ ಪ್ರತಿಭಟನೆ ಮುಟುಕುಗೊಳಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್