ಹಾವೇರಿ : ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ದುಂಡಸಿ ಗ್ರಾಮದಲ್ಲಿ ಪರಶುರಾಮ ಲಮಾಣಿ ಎಂಬ ವ್ಯಕ್ತಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡುತ್ತಿದ್ದರೆಂದು ತಿಳಿದು ಖಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿದ್ದು ಇದು
ದುಂಡಸಿ ಗ್ರಾಮ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಆಸ್ತಿ ನಂಬರ್ (೮೮) ಕರ್ನಾಟಕ ಸರ್ಕಾರದ ಆಸ್ತಿಯೆಂದು ಖಚಿತವಾಗಿದ್ದು ಈ ಆಸ್ತಿಯಲ್ಲಿ ಅಕ್ರಮ ಗಣಿಗಾರಿಕೆಯನ್ನು ನಡೆಸುತ್ತಿದ್ದರು ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ದೂರವಾಹಿನಿ ಮೂಲಕ ಮಾತನಾಡಿದ ಶಿಗ್ಗಾಂವಿಯ ತಶೀಲ್ದಾರರಾದ ರವಿ ಕೊರವರವರು ಅಕ್ರಮ ಮರಳು ಮಾರಾಟ ಮಾಡುತ್ತಿದ್ದ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹಾಗೆ ದುಂಡಸಿ ಗ್ರಾಮದ ತಲಾಟಿಯವರಾದ ಸಾವಿತ್ರಿ ಬಡಿಗೇರ ಮತ್ತು ಗ್ರಾಮ ಸಹಾಯಕ ಪ್ರಶಾಂತರವರು ಕೂಡ ಉಪಸ್ಥಿತರಿದ್ದರು.
ವರದಿ : ರಮೇಶ್ ತಾಳಿಕೋಟಿ