Ad imageAd image

ಸಾವಯುವ ಕ್ಷೇತ್ರದಲ್ಲಿ ಜೋಯ್ಡಾ ಸಾಧನೆಗೆ ಆರ್.ವಿ. ದೇಶಪಾಂಡೆ ಸಂತಸ

Bharath Vaibhav
ಸಾವಯುವ ಕ್ಷೇತ್ರದಲ್ಲಿ ಜೋಯ್ಡಾ ಸಾಧನೆಗೆ ಆರ್.ವಿ. ದೇಶಪಾಂಡೆ ಸಂತಸ
WhatsApp Group Join Now
Telegram Group Join Now

————————————————–-ದೇಶದಲ್ಲಿಯೇ ಸಾವಯುವ ಕ್ಷೇತ್ರದಲ್ಲಿ ಜೋಯ್ಡಾ ನಂ.1 ತಾಲ್ಲೂಕು

ಹೌದು ಉತ್ತರ ಕನ್ನಡ ಜಿಲ್ಲೆಯ ಜೋಯ್ಡಾ ತಾಲ್ಲೂಕುನ್ನು ಸಾವಯುವ ತಾಲ್ಲೂಕುನ್ನಾಗಿ ಪರಿವರ್ತಿಸುವ ಕಾರ್ಯಕ್ರಮವು ನಿನ್ನೆ ಉತ್ತರ ಕನ್ನಡ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ನಡೆಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆರ್.ವಿ ದೇಶಪಾಂಡೆ, ಮುಖ್ಯ ಉದ್ಘಾಟನಾ ಕಾರರಾಗಿ ಕೃಷಿ ಸಚಿವ ಚಲುವರಾಯಸ್ವಾಮಿ ಹಾಗೂ ವಿವಿಧ ಕೃಷಿ ಇಲಾಖೆ ಅಧಿಕಾರಿಗಳು, ವಿವಿಧ ಇಲಾಖೆ ಅಧಿಕಾರಿಗಳು ಆಗಮಿಸಿದ್ದರು.

ಈ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಕೃಷಿಯಂತ್ರಗಳು ಹಾಗೂ ಉಪ ಕರಣಗಳನ್ನು ಸಬ್ಸಿಡಿ ಆಧಾರದಲ್ಲಿ ಹಳಿಯಾಳ ಹಾಗೂ ಜೋಯ್ಡಾದಲ್ಲಿ ವಿತರಣೆ ಮಾಡಲಾಯಿತು. ನಂತರ ಕೃಷಿ ಸಚಿವರು ಹಾಗೂ ಶಾಸಕರು ಮತ್ತು ಜಿಲ್ಲಾಧಿಕಾರಿಗಳು ಜೊತೆಗೂಡಿ ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದರು.

ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಅವರು ನಡೆಸಿದ ಸಂದರ್ಶನದಲ್ಲಿ ಮಾತನಾಡಿದ ಹಳಿಯಾಳ-ದಾಂಡೇಲಿ ಕ್ಷೇತ್ರದ ಶಾಸಕರು ಹಾಗೂ ಜೋಯ್ಡಾ ಕೃಷಿ ಅಧಿಕಾರಿಗಳು ಆದ ವೀಣಾ ಬೀಡಿಕರ್ ತಮ್ಮ ಅಭಿಪ್ರಾಯ ಹಂಚಿಕೊಂಡರು. ಒಟ್ಟಾರೆ ದೇಶದಲ್ಲಿಯೇ ಜೋಯ್ಡಾ ತಾಲ್ಲೂಕು ಸಾವಯುವ ಕ್ಷೇತ್ರದಲ್ಲಿ ನಂ.1 ಸ್ಥಾನ ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!