Ad imageAd image

ಸವದತ್ತಿ ರೇಣುಕಾ ಯಲ್ಲಮ್ಮಾ ದೇವಿ ಜಾತ್ರೆಯ ದರ್ಶನಕ್ಕೆ ಲಕ್ಷಾಂತರ ಜನ ಸಾಗರ.

Bharath Vaibhav
ಸವದತ್ತಿ ರೇಣುಕಾ ಯಲ್ಲಮ್ಮಾ ದೇವಿ ಜಾತ್ರೆಯ ದರ್ಶನಕ್ಕೆ ಲಕ್ಷಾಂತರ ಜನ ಸಾಗರ.
WhatsApp Group Join Now
Telegram Group Join Now

ಸವದತ್ತಿ:ಭಾರತ ಹುಣ್ಣಿಮೆಯ ಪ್ರಯುಕ್ತ ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ವಿವಿಧ ರಾಜ್ಯಗಳಿಂದ ಜನ ಸಾಗರ ಹರಿದು ಬರುತ್ತಿದ್ದು. ಲಕ್ಷಾಂತರ ಜನರು ಶ್ರೀ ರೇಣುಕಾ ಯಲ್ಲಮ್ಮಾ ದೇವಿ ದರ್ಶನ ಮಾಡಿರುತ್ತಾರೆ ಹಾಗೂ ಮಾಡುತ್ತಿರುವರು.

ಸದರಿ ಭಕ್ತಾದಿಗಳು ದೇವಿ ದರ್ಶನಕ್ಕೆ ರೇಣುಕಾ ದೇವಿ ಆಡಳಿತ ಮಂಡಳಿ ಹಾಗೂ ಪೊಲೀಸ ಸಿಬ್ಬಂದಿ ವರ್ಗದವರು ಜನರಿಗೆ ದರ್ಶನಕ್ಕೆ ಸಹಾಯ ಮತ್ತು ಸಹಕಾರ ಮಾಡುತ್ತಿರುವರು. ದೇವಿಯ ಲೀಲೆಯನ್ನು ಭಕ್ತಾದಿಗಳು ” ರೇಣುಕಾ ನಿನ್ನ ಪಾಲಕ ಉಧೋ ಉಧೋ ” ಎಂದು ದೇವಿ ಭಕ್ತಾದಿಗಳು ಹರ್ಷೋಲ್ಲಾಸದಿಂದ ದೇವಿ ದರ್ಶನ ಮಾಡುತ್ತಿರುವುದು ನಮ್ಮ ಉತ್ತರ ಕರ್ನಾಟಕದ ಒಂದು ದೊಡ್ಡ ಜಾತ್ರೆಯಾಗಿದೆ.

ಭಕ್ತಾದಿಗಳು ಮೊದಲು ಜೋಗುಳ ಬಾವಿ ಸತ್ಯವ್ವಾ ನ ದರ್ಶನಕ್ಕೆ ಮೊದಲು ಭಕ್ತಾದಿಗಳು ತಮ್ಮ ಪಾಪ್ ಪರಿಹಾರ ವಾಗಲೆಂದು ಬಾವಿಯಲ್ಲಿ ಅಲ್ಲಿಯೇ ಸ್ನಾನ ಮಾಡಿ, ಹೂಟಗಿ ಉಟ್ಟು ತದ ನಂತರ ಜೋಗುಳ ಬಾವಿ ಸತ್ಯವನ ದರ್ಶನ ತೆಗೆದುಕೊಳ್ಳುವರು. ಇದು ಮೊದಲಿನಿಂದಲೂ ಬಂದ್ ಪದ್ಧತಿಯಾಗಿದೆ.
ತದನಂತರ ರೇಣುಕಾದೇವಿ ದರ್ಶನಕ್ಕೆ ಸುಮಾರು ಗಂಟೆಗಳ ವರೆಗೆ ಸರತಿ ಸಾಲಿನಲ್ಲಿ ನಿಂತು ಸಾಮಾನ್ಯ ಜನರು ದರ್ಶನ ಪಡೆಯುತ್ತಿದ್ದೂ, ಅದರಲ್ಲಿ ವಿಶೇಷ ದರ್ಶನಕ್ಕಾಗಿ (ವಿ. ಆಯ್. ಪಿ. ದರ್ಶನ್ ) ಸರತಿ ಸಾಲಿನಲ್ಲಿ ಶುಲ್ಕ ಭರಿಶಿ ದರ್ಶನ್ ಪಡೆಯುತ್ತಿದ್ದಾರೆ.

ತದನಂತರ ಏನೇಹೊಂಡ್ ನೀರು ಮೈಗೆ ತಗಿಲಿಸಿಕೊಂಡು ದೇವಿ ದರ್ಶನ್ ಹಾಗೂ ಇನ್ನಿತರ ದರ್ಶನ್ ಮಾಡುವುದು ಇದು ಐತಿಹಾಸಿಕ ಸಂಪ್ರದಾಯ ಇರುತ್ತದೆ.

ಪರಶುರಾಮ್, ಎಕ್ಕಯ್ಯ್ ಜೋಗಯ್ಯ ಮತ್ತು ಜಮದಗ್ನಿ ದರ್ಶನ್ ಪಡೆಯುವುದು ಭಕ್ತಾದಿಗಳ ಸಂಪ್ರದಾಯ ಇರುತ್ತದೆ.ಭಕ್ತಾದಿಗಳು ಕಾಲುನಡಿಗೆಯಿಂದ, ಎತ್ತಿನಗಾಡಿ ಮುಖಾಂತರ, ಟ್ರಾಕ್ಟರ್ ಮುಖಾಂತರ, ಬಸ್ ಗಳ ಮುಖಾಂತರ, ಖಾಸಗಿ ವಾಹನಗಳ ಮುಖಾಂತರ ಭಕ್ತಾದಿಗಳು ಕರ್ನಾಟಕ, ಮಹಾರಾಷ್ಟ್ರ , ಗೋವಾ ಹಾಗೂ ಇತರೆ ರಾಜ್ಯಗಳಿಂದ ಭಕ್ತಾದಿಗಳು ಆಗಮಿಸಿ ಶ್ರೀ ರೇಣುಕಾ ದೇವಿ ದರ್ಶನ ಪಡೆಯುತ್ತಾರೆ. ಇದು ಉತ್ತರ ಕರ್ನಾಟಕದ ಇದೊಂದು ಅತೀ ದೊಡ್ಡ ಜಾತ್ರೆಯಾಗಿದೆ.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!