ಹಾವೇರಿ :ಕಲಘಟಗಿ ತಾಲೂಕಿನ ಬೆಂಡಲಗಟ್ಟಿ ಗ್ರಾಮದ ನಿವಾಸಿಯಾಗಿರುವ ಮತ್ತು ಪತ್ರಕರ್ತರಾಗಿ ಕಾರ್ಯ ನಿರ್ವಹಿಸುತ್ತಿರು ನಾಗರಾಜ ವನಳ್ಳಿಯವರಿಗೆ ರಾಜ್ಯ ಮಾದ್ಯಮ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಯುವ ಪತ್ರಕರ್ತರಾದ ನಾಗರಾಜ ವನಳ್ಳಿಯವರು ಮಾತನಾಡಿ ಪತ್ರಿಕೋದ್ಯಮವು ಸಂವಿಧಾನದ ನಾಲ್ಕನೇ ಅಂಗ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಾವುಗಳು ಅತ್ಯಂತ ಶ್ರದ್ಯೆ ಮತ್ತು ಪ್ರಾಮಾಣಿಕತೆಯಿಂದ ಕೆಲಸ ಮಾಡಿ ಅನ್ಯಾದ ವಿರುದ್ಧ ಹೋರಾಡುವಲ್ಲಿ ನಮ್ಮ ಮಾದ್ಯಮದ ಪಾತ್ರ ಬಹು ಮುಖ್ಯ ಎಂದು ಹೇಳಿದರು.
ದಿನಾಂಕ ೯/೨/೨೫ ರಂದು ರವಿವಾರ ಹುಬ್ಬಳ್ಳಿಯ ಢಾ. ಅಂಬೇಡ್ಕರ್ ಸಭಾಭವನದಲ್ಲಿ ನಡೆದ ವಿಶ್ವ ವಿಜಯ ಪತ್ರಿಕೆಯ ೨೦ನೇ ವಾರ್ಷಿಕೋತ್ಸವದ ಅಂಗವಾಗಿ ಹಲವಾರು ಸಾಧಕರಿಗೆ ರಾಜ್ಯ ಮಾದ್ಯಮ ರತ್ನ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ವಿಜಯ ಪತ್ರಿಕೆಯ ಸಂಪಾದಕರಾದ ಡಿ ಎಂ ಬುರಡಿ ಹಾಗೆ ಹಲವಾರು ಗಣ್ಯರು ಉಪಸ್ಥಿತರಿದ್ದರು.