ಸುರಪುರ :ತಾಲೂಕಿನ ತಿಂಥಣಿ ಸಮೀಪದ ಶಾಂತಪೂರ ಕ್ರಾಸ್ ಬಳಿ ಇಂದು ಬೆಳಿಗ್ಗೆ ಖಾಸಗಿ ಬಸ್ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಏಳು ಜನರು ಸ್ಥಳದಲ್ಲಿ ಸುಟ್ಟು ಕರಕಲಾಗಿದ್ದರೆ ಸುರಪೂರಿನ್ ವೇಣು ಗೋಪಾಲಸ್ವಾಮಿ ದೇವಸ್ಥಾನದ ದರ್ಶನ ಪಡೆದು ಕೊಂಡು ಶಿರವರಾ ತೆರಳುತ್ತಿದ್ದ ಕಾರು ಬಸ್ಸಿಗೆ ಡಿಕ್ಕಿಯಾಗಿ ಬೆಂಕಿ ತಗುಲಿ ಕಾರಿನಲ್ಲಿದ್ದ ಒಂದೇ ಕುಟುಂಬದವರ ಏಳು ಜನರು ದುರ್ಮರಣ ರಾಯಚೂರ ಜಿಲ್ಲೆಯ ಶಿರವರ ಪಂಚಾಯತ ಸದಸ್ಯ ಕೃಷ್ಣ ನಾಯಕ್ ಕುಟುಂಬದವರ ಇಬ್ಬರು ಮಕ್ಕಳು ಗಾಯಗೊಂಡಿದ್ದು ಅವರನ್ನು ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ವೇಳೆ ಘರ್ಷಣೆಗೆ ಎರಡು ವಾಹನಗಳಿಗೆ ಬೆಂಕಿ ಹತ್ತಿಕೊಂಡು ಬೆಂಕಿಯ ಕೆನ್ನಾಲಿಗೆ ಮುಗಿಲೆತ್ತರಕ್ಕೆ ಚಾಚಿತು ಕಾರಿನಲ್ಲಿದ್ದ ಜನರು ಸುಟ್ಟು ಕರಕಲಾಗಿ ಕೆಲವರ ಬುರುಡೆಗಳು ಮಾತ್ರ ಕಾಣುತ್ತಿದ್ದವು ಸ್ಥಳಕ್ಕೆ ಅಗ್ನಿಶಾಮಕ ದಳ ಸ್ಥಳೀಯರು ಮತ್ತು ಪೊಲೀಸರ ನೆರವಿನೊಂದಿಗೆ ಉಳಿದವರನ್ನು ರಕ್ಷಿಸಲಾಗಿದೆ ಈ ಅಪಘಾತದಲ್ಲಿ ಮೃತಪಟ್ಟ ಕೃಷ್ಣ ನಾಯಕ್ (೫೨) ಪತ್ನಿ ಅನಂತಕಲ್ (೪೫) ಶರಣಪ್ಪ(೩೫)ನಿಸರ್ಗ ಶರಣಪ್ಪ (೩೦) ಸಿದ್ಧಾರ್ಥ್(೩)ಶಶಿಕಲಾ(೩೦) ಆರು ಜನರ ಮಕ್ಕಳಾದ ಆದ್ವಿಕ(೫) ಶ್ರೀನಿಧಿ (೨) ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಘಟನಾ ಸ್ಥಳಕ್ಕೆ ಸುರಪುರಿನ ಶಾಸಕ ರಾಜ ವೇಣುಗೋಪಾಲ್ ನಾಯಕ್,ಮತ್ತು ಅಧಿಕಾರಿಗಳು ಬೇಟಿ ನೀಡಿ ಮೃತ ಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.




