ಗುಡಿಬಂಡೆ : ಸಿಪಿಐಎಂ ಪಕ್ಷದಿಂದ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದಿಂದ ಜಿ.ವಿ.ಶ್ರೀರಾಮರೆಡ್ಡಿರವರು ಎರಡು ಬಾರಿ ಶಾಸಕರಾಗಿ. ಆಯ್ಕೆಯಾಗಿ ಕ್ಷೇತ್ರದಲ್ಲಿ ಶಾಶ್ವತವಾದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಿ ಅಜರಾಮರಾಗಿದ್ದಾರೆಂದು ಪತ್ರಕರ್ತ ಎನ್ ಆನಂದ್ ತಿಳಿಸಿದರು.
ಗುಡಿಬಂಡೆ ತಾಲ್ಲೂಕಿನ ಕಡೇಹಳ್ಳಿ ಕ್ರಾಸ್ ನಲ್ಲಿ ಜಿ.ವಿ.ಶ್ರೀರಾಮರೆಡ್ಢಿ ಅಭಿಮಾನಿ ಬಳಗದಿಂದ 4ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ವೇಳೆಯಲ್ಲಿ ಪತ್ರಕರ್ತ ಎನ್.ಅನಂದ್ ರವರು ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು.
ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿರವರ ಪುಣ್ಯ ಸ್ಮರಣೆಯ ಅಂಗವಾಗಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಿಪಿಐಎಂ ಕಾರ್ಯದರ್ಶಿ ವೆಂಕಟರಾಜು, ಮುಖಂಡರಾದ ಗೋಪಾಲಕೃಷ್ಣ, ಸಮಾಜ ಸೇವಕ ಶ್ರೀನಿವಾಸ ಗಾಂಧಿ ಗುತ್ತಿಗೆದಾರ ಭೈರಪ್ಪ, ತೀಲಕುಂಟಹಳ್ಳಿ ಅಶ್ವತ್ಥ್ ರೆಡ್ಡಿ, , ಲಕ್ಕೇನಹಳ್ಳಿ ನರಸಿಂಹರೆಡ್ಡಿ, ಮಧು, ಕೆ.ಎಚ್.ವೆಂಕಟಶಿವಾರೆಡ್ಡಿ, ಕೆ.ಜಿ.ರವೀಂದ್ರರೆಡ್ಡಿ ,ಕಡೇಹಳ್ಳಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ರಾಮಕೃಷ್ಣರೆಡ್ಡಿ, ಬಿ.ಎನ್.ಆದಿನಾರಾಯಣಪ್ಪ ಮುಂತಾದವರು ಉಪಸ್ಥಿತರಿದ್ದರು.
ವರದಿ : ಬಿ.ಎ.ಬಾಬಾಜಾನ್




