Ad imageAd image

ಶ್ರೀ ಮಹಿಷಿ ಮರ್ಧಿನಿ ಮತ್ತು ಶ್ರೀ ರೇಣುಕಾ ಯಲ್ಲಮ್ಮದೇವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ರೇಣುಕಾ ಯಲ್ಲಮ್ಮದೇವಿ 14ನೇ ವಾರ್ಷಿಕೋತ್ಸವ

Bharath Vaibhav
ಶ್ರೀ ಮಹಿಷಿ ಮರ್ಧಿನಿ ಮತ್ತು ಶ್ರೀ ರೇಣುಕಾ ಯಲ್ಲಮ್ಮದೇವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶ್ರೀ ರೇಣುಕಾ ಯಲ್ಲಮ್ಮದೇವಿ 14ನೇ ವಾರ್ಷಿಕೋತ್ಸವ
WhatsApp Group Join Now
Telegram Group Join Now

ಬೆಂಗಳೂರು: ಶ್ರೀ ಮಹಿಷಿ ಮರ್ಧಿನಿ ಮತ್ತು ಶ್ರೀ ರೇಣುಕಾ ಯಲ್ಲಮ್ಮದೇವಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜಿ.ಸರ್ವೇಶ್ ಅವರ ನೇತೃತ್ವದಲ್ಲಿ ಮತ್ತು ಶ್ರೀ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮೀಜಿಗಳು ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠ ಶ್ರೀ ಸುಜ್ಞಾನ ಪೀಠ ಆರೆಮಾದನಹಳ್ಳಿ ಅವರುಗಳ ದಿವ್ಯ ಸಾನಿಧ್ಯದಲ್ಲಿ ಮಂಚನಹಳ್ಳಿ ಗ್ರಾಮ ಅತ್ತಿಬೆಲೆ ಕೈಗಾರಿಕಾ ಪ್ರದೇಶ ಹೊಸೂರು ರಸ್ತೆ ರಾಮೀ ಗೆಸ್ಟ್ ಲೈನ್ ಹೋಟೆಲ್ ಹತ್ತಿರ ಶ್ರೀ ರೇಣುಕಾ ಯಲ್ಲಮ್ಮದೇವಿ 14ನೇ ವಾರ್ಷಿಕೋತ್ಸವ ದಿನಾಂಕ 20 ಫೆಬ್ರವರಿ 2025ರಂದು ಗುರುವಾರ ಸಂಜೆ 5ಗಂಟೆಗೆ ಶ್ರೀ ರೇಣುಕಾ ಯಲ್ಲಮ್ಮದೇವಿಗೆ ಹೋಮ ಹವನ ವಿಶೇಷ ಪೂಜೆ ಪುನಸ್ಕಾರ ಮಹಾಮಂಗಳಾರತಿ ನಡೆಯುತ್ತಿದೆ.

ದಿನಾಂಕ 21ರಂದು ಶುಕ್ರವಾರ ಕಳಶಾಧಿವಾಸ, ಚಂಡಿಕಾ ಹೊಮ ಮತ್ತು ವೀರಗಾಸೆ ಕುಣಿತ ತೀರ್ಥ ಪ್ರಸಾದ ವಿನಿಯೋಗ ನಡೆಯಲಿದ್ದು‌. ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಈ ಅದ್ಬುತ ಕಾರ್ಯಕ್ರಮಕ್ಕೆ ವಿವಿಧ ಮಠಾಧೀಶರು ಆಗಮಿಸಲಿದ್ದು. ಈ ಎರಡು ದಿನಗಳ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಬೇಕು ಎಂದು ಮಹಿಷಿ ಮರ್ಧಿನಿ ಮತ್ತು ಶ್ರೀ ರೇಣುಕಾ ಯಲ್ಲಮ್ಮದೇವಿ ಚಾರಿಟೇಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಜಿ. ಸರ್ವೇಶ್ ಬಿ ವಿ ನ್ಯೂಸ್-5 ಚಾನಲ್ ಜೊತೆಗೆ ಮಾತನಾಡಿದ್ದಾರೆ.

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
Share This Article
error: Content is protected !!