ಹುಮನಾಬಾದ : ವಿದ್ಯಾರ್ಥಿಗಳು ಎಷ್ಟೇ ಇತ್ತರಕ್ಕೆ ಬೆಳದರೂ ಕೂಡ ತಾವುಗಳು ಕಲಿತ ಶಾಲೆಯನ್ನು ಮರೆಯದೆ ಆ ಶಾಲೆಯ ಕೀರ್ತಿ ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಮಾಜಿ ಸಚಿವ ರಾಜಶೇಖರ್ ಪಾಟೀಲ ಹೇಳಿದರು.ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ್ ಬಿ.ಪಟ್ಟಣದ ಆರ್.ಜಿ. ಹಿಬಾರೆ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ವಿದ್ಯಾ ಮಹೋತ್ಸವ ಹಾಗೂ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಹೊಸ ಹೊಸ ಮಾದರಿಗಳನ್ನು ಮಾಡುವುದರಿಂದ ವೈಜ್ಞಾನಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಸಾಧಿಸುವಲ್ಲಿ ಯಾವುದೇ ಸಂದೇಹವಿಲ್ಲ.ಕಲಿಯುವ ಆಸಕ್ತಿ ಮತ್ತು ಪ್ರಯತ್ನ ಮಾಡಿದರೆ ಯಶಸ್ವಿಯಾಗುತ್ತಾರೆ ಎಂದು ಹೇಳಿದರು.
ಆರ್. ಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ನಾಗರಾಜ್ ಹಿಬಾರೆ ಮಾತನಾಡಿ,ಇಂತಹ ವಿಜ್ಞಾನ ಮತ್ತು ಕಲಾ ವಸ್ತು ಪ್ರದರ್ಶನದಿಂದ ಮಕ್ಕಳಲ್ಲಿನ ನೈಜತೆ, ಕ್ರಿಯಾತ್ಮಕ ಚಟುವಟಿಕೆ,ಹಾಗೂ ಮಕ್ಕಳ ಸುಪ್ತವಾದ ಪ್ರತಿಭೆ ಅರಳುತ್ತದೆ ಎಂದರು.
ವಸ್ತು ಪ್ರದರ್ಶನದಲ್ಲಿ ಸಸ್ಯಶಾಸ್ತ್ರ,ಪ್ರಾಣಿಶಾಸ್ತ್ರ, ರಸಾಯನಶಾಸ್ತ್ರ, ಐತಿಹಾಸಿಕ ಮತ್ತು ಭೌಗೋಳಿಕ ಹಾಗೂ ವೈಜ್ಞಾನಿಕ ಮಾದರಿಗಳು ಇದ್ದವು. ಈ ವಸ್ತು ಪ್ರದರ್ಶನ ನೋಡಲು ಬೇರೆ ಬೇರೆ ಶಾಲೆಯಿಂದ ವಿದ್ಯಾರ್ಥಿಗಳು ಹಾಗೂ ಪಾಲಕರು, ಸಾರ್ವಜನಿಕರು ಆಗಮಿಸಿ ಮಾದರಿಗಳನ್ನು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೇಶವರಾವ ತಳಘಟಕರ್, ರಾಹುಲ ಮಿಶ್ರಾ,ಸಂಸ್ಥೆಯ ಕಾರ್ಯದರ್ಶಿ ರುಚಿತಾ ನಾಗರಾಜ ಹಿಬಾರೆ,ಪುರಸಭೆ ಸದಸ್ಯ ಯುಸುಫ್ ಸೌದಾಗರ್, ಭೀಮರಾವ ನಾಯಕ್ , ಕೆ.ಶಿಲ್ಪಾವತಿ,
ಅಬ್ದುಲ ರಜಾಕ್, ಅಶೋಕ ಬಾವಗಿ, ಶಿವರಾಜ ಲಾಡಕರ್,ಸಂತೋಷ ಪಾಟೀಲ, ಚಾಂದ ಖುರೇಶಿ,ಶಾಂತು ಅರಳಿ,ರಮೇಶ ಮಾಳಗೆ, ಸಂದೀಪ್ ತಿರ್ಥಾ, ಚಂದು ಮಾಲೆ,ಆಕಾಶ ಶಿಂಧೆ, ಸೋಮನಾಥ ಜ್ಯಾಂತೆ,ಹಸನ್ ಸೇರಿದಂತೆ ಇತರರು ಇದ್ದರು.
ವರದಿ: ಸಜೀಶ ಲಂಬುನೋರ್