Ad imageAd image

ಬಾಂಡ್ರಾವಿ ಗ್ರಾಮದ ಎರಡು ಕಣ್ಣಿನ ಆಕರ್ಷಕ ಹನುಮನಿಗೆ ಈ ದಿನ ವಿಜೃಂಭಣೆಯ ರಥೋತ್ಸವ.

Bharath Vaibhav
ಬಾಂಡ್ರಾವಿ ಗ್ರಾಮದ ಎರಡು ಕಣ್ಣಿನ ಆಕರ್ಷಕ ಹನುಮನಿಗೆ ಈ ದಿನ ವಿಜೃಂಭಣೆಯ ರಥೋತ್ಸವ.
WhatsApp Group Join Now
Telegram Group Join Now

ಮೊಳಕಾಲ್ಮುರು:ಬಹುತೇಕ ಎಲ್ಲಾ ಆಂಜನೇಯ ದೇವಸ್ಥಾನಗಳಲ್ಲಿ ಒಂದು ಕಣ್ಣಿನಿಂದ ಗೋಚರಿಸುತ್ತದೆ ಆದರೆ ತಾಲೂಕಿನ ಬಾಂಡ್ರಾವಿ ಗ್ರಾಮದಲ್ಲಿ ಉದ್ಭವಮೂರ್ತಿ ಶ್ರೀ ಹನುಮನಿಗೆ ಎರಡು ಕಣ್ಣು ನಿದ್ಧರವಾಗಿ ಕಾಣುತ್ತದೆ ವಿಶೇಷವೆಂದರೆ ನೂರಾರು ವರ್ಷಗಳ ಇತಿಹಾಸವಿರುವ ಈ ಉದ್ಭವ ಮೂರ್ತಿ ಆಂಜನೇಯನಿಗೆ ಇಂದು ಬುಧುವಾರ ಸಾವಿರಾರು ಭಕ್ತರೊಂದಿಗೆ ರಥದಲ್ಲಿ ಕೂಡಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡುವರು ಬುಧುವಾರ ಗುರುವಾರ ಜಾತ್ರೆ ಮಹೋತ್ಸವ ಜರಗಲಿದೆ ಎಂದು ದೇವಾಲಯ ಆಡಳಿತ ಮಂಡಳಿ ತಿಳಿಸಿದೆ.
ಜಾತ್ರೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಅಭಿಷೇಕಗಳು ಭಜನೆ ಹೋಮ ಡೊಳ್ಳು ವಾದ್ಯಗಳೊಂದಿಗೆ ರಥೋತ್ಸವ ನಡೆಯುತ್ತದೆ.

ಇದರ ವಿಶೇಷವೇನೆಂದರೆ ವ್ಯಾಸರಾಯರ ಕಾಲದಲ್ಲಿ ಕುಂಭಾಭಿಷೇಕ ನಡೆದಿದೆ ವಿಶೇಷ ಹೋಮಗಳು ಹವನಗಳು ಈ ಉದ್ಭವ ಮೂರ್ತಿಗೆ ನಡೆದಿದೆ. ಈ ದೇವಸ್ಥಾನವು ಪ್ರಮುಖ ಧಾರ್ಮಿಕ ಸ್ಥಳವಾಗಿದೆ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಆಧ್ಯಾತ್ಮಿಕ ಅನುಭವ ನೀಡುವ ಪ್ರಮುಖ ಸ್ಥಳವಾಗಿದೆ,
ಬಾಂಡ್ರವಿ ಆಂಜನೇಯ ಸ್ವಾಮಿ ದೇವಾಲಯವು ಆಧ್ಯಾತ್ಮಿಕ ಶಾಂತಿ ಮತ್ತು ಧಾರ್ಮಿಕ ಅನುಭವವನ್ನು ನೀಡುವ ಸ್ಥಳವಾಗಿದೆ.

ನಗುಮುಖದ ಸರದಾರ ಆಂಜನೇಯ ದೇವಸ್ಥಾನದ ಬಗ್ಗೆ ಅರ್ಚಕರಾದ ಗಿರೀಶ್ ಅವರು ವಿಸ್ತೃತವಾಗಿ ವಿವರಿಸಿದ್ದಾರೆ. ವಿಶೇಷವಂದರೆ ಸಾರ್ವಜನಿಕರು ಈ ದೇವಸ್ಥಾನಕ್ಕೆ ಬಂದು ಹರಕೆ ಹೊತ್ತು ಹೋದರೆ ಶೇಕಡ 80ರಷ್ಟು ಈಡೇರುತ್ತದೆ ಎನ್ನುತ್ತಾರೆ ಅರ್ಚಕ ಗಿರೀಶ್.

ಒಟ್ಟಿನಲ್ಲಿ ವಿಶೇಷವಾಗಿ ನೆಲೆಸಿರುವ ಈ ನಗುಮುಖದ ಸರದಾರನಿಗೆ ಇಂದು ಮತ್ತು ನಾಳೆ ಜಾತ್ರಾ ಮಹೋತ್ಸವ ನೀರಿರಲಿದೆ ಈ ಜಾತ್ರೆಗೆ ನೆರೆಯ ಆಂಧ್ರಪ್ರದೇಶ ಮೊಳಕಾಲ್ಮೂರು ಸುತ್ತಮುತ್ತಲಿನ ನೂರಾರು ಗ್ರಾಮಗಳಿಂದ ಸಾವಿರಾರು ಭಕ್ತರು ಆಗಮಿಸಿ ತಮ್ಮ ಹರಕೆಯನ್ನು ತೀರಿಸುತ್ತಾರೆ. ನೀವು ಈ ಜಾಗಕ್ಕೆ ಒಮ್ಮೆಯಾದರೂ ಭೇಟಿ ಕೊಡಿ.

ವರದಿ: ಪಿಎಂ ಗಂಗಾಧರ್ 

WhatsApp Group Join Now
Telegram Group Join Now
Share This Article
error: Content is protected !!