Ad imageAd image

ಇಂದು ತಿಪಟೂರು ಶ್ರೀ ಗುರುಕುಲ ವಿದ್ಯಾಸಂಸ್ಥೆ ಪ್ರತಿಭೋತ್ಸವ

Bharath Vaibhav
ಇಂದು ತಿಪಟೂರು ಶ್ರೀ ಗುರುಕುಲ ವಿದ್ಯಾಸಂಸ್ಥೆ ಪ್ರತಿಭೋತ್ಸವ
WhatsApp Group Join Now
Telegram Group Join Now

ತಿಪಟೂರು: ನಗರದ ಗುರುಕುಲ ವಿದ್ಯಾಸಂಸ್ಥೆಯ ಪ್ರತಿಭೋತ್ಸವ 2025 ಕಾರ್ಯಕ್ರಮವನ್ನು ಫೆಬ್ರವರಿ 12 ರಂದು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಸಿಡ್ಲೆಹಳ್ಳಿ ಮಹಾಸಂಸ್ಥಾನ ಮಠ ಶ್ರೀ ಗುರುಕುಲಾನಂದಾಶ್ರಮದ ಸದ್ಗುರು ಶ್ರೀ ಇಮ್ಮಡಿ ಕರಿಬಸವದೇಶಿಕೇಂದ್ರ ಮಹಾಸ್ವಾಮಿಜಿ ವಹಿಸಲಿದ್ದು, ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನ ಉಪನ್ಯಾಸಕರಾದ ಪ್ರೊ. ಲೋಕೇಶ್ವರಯ್ಯ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಶೈಕ್ಷಣಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಗುವುದು. ಮುಖ್ಯ ಅತಿಥಿಗಳಾಗಿ ಪೊಲೀಸ್ ಉಪಾಧಿಕ್ಷಕರಾದ ವಿನಾಯಕ ಶೆಟ್ಟಿಗೇರಿ, ಜಿಲ್ಲಾ ಕಾಂಗ್ರೆಸ್ ಯುವ ಅಧ್ಯಕ್ಷ ನಿಖಿಲ್ ರಾಜಣ್ಣ, ಶೇಖರ್ ಆಸ್ಪತ್ರೆಯ ಡಾ.ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಚಂದ್ರಯ್ಯ, ವಿಶೇಷ ಆಹ್ವಾನಿತರಾಗಿ ಪತ್ರಕರ್ತರಾದ ಪ್ರಶಾಂತ್ ಕರಿಕೆರೆ, ನ್ಯೂ ತುಮಕೂರು ಟೈಮ್ಸ್ ನ ಸಂಸ್ಥಾಪಕ ಟಿ.ಬಿ.ರೇಣುಕಾ ಪ್ರಸಾದ್(ಸ್ವಾಮಿ ತಿಮ್ಲಾಪುರ), ತಡಸೂರಿನ ಪ್ರಗತಿಪರ ಕೃಷಿಕರಾದ ಯೋಗಾನಂದ ಮೂರ್ತಿ ಭಾಗವಹಿಸಲಿದ್ದಾರೆ.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
Share This Article
error: Content is protected !!