ಚನ್ನಮ್ಮನ ಕಿತ್ತೂರು : ಕಿತ್ತೂರ ತಾಲೂಕಿನ ಗ್ರಾಮ ಇಂದು ಆಡಳಿತ ಅಧಿಕಾರಿಗಳು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ 2 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ. ಕಿತ್ತೂರಿನ ಆಡಳಿತ ಸೌಧದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ನಡೆಸುತ್ತಿರುವ ಇವತ್ತಿಗೆ 3 ನೇ ದಿನಕ್ಕೆ ಕಾಲಿಟ್ಟಿದೆ. ಕರ್ನಾಟಕ ರಾಜ್ಯ ಹಸಿರು ಸೇನೆ ರೈತ ಸಂಘದ ರಾಜ್ಯ ಅಧ್ಯಕ್ಷರು ಆದ ಶ್ರೀಯುತ ರವಿ ಪಾಟೀಲ ರವರು ಕಿತ್ತೂರಿಗೆ ಬಂದಾಗ ಗ್ರಾಮ ಆಡಳಿತ ಅಧಿಕಾರಿಗಳ ಮುಸ್ಕರದಲ್ಲಿ ಪಾಲ್ಗೊಂಡು ಸಹಕಾರ ಮತ್ತು ಬೆಂಬಲ ಸೂಚಿಸಿ ಸದಾ ಗ್ರಾಮ ಆಡಳಿತ ಅಧಿಕಾರಿಗಳೊಂದಿಗೆ ಇರುವುದಾಗಿ ಹೇಳಿ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯ ಮಂತ್ರಿ ಯವರಿಗೆ ಮತ್ತು ಮಾನ್ಯ ಕಂದಾಯ ಇಲಾಖೆಯ ಮಂತ್ರಿ ಯವರೊಂದಿಗೆ ಚರ್ಚಿಸಿ ಬೇಡಿಕೆಗಳನ್ನು ಈಡೇರಿಸಲು ಮನವಿ ಮಾಡುವುದಾಗಿ ಹೇಳಿದರು.
ಈ ಸಮಯದಲ್ಲಿ ಕಿತ್ತೂರು ತಾಲೂಕಿನ ಗ್ರಾಮ ಆಡಳಿತ ಅಧಿಕಾರಿಗಳು ಮತ್ತು ನಿಕಟ ಪೂರ್ವ ಅಧ್ಯಕ್ಷರು ಮತ್ತು ಕಿತ್ತೂರು ತಾಲೂಕಿನ ಎನ್. ಪಿ. ಎಸ್ ಅಧ್ಯಕ್ಷರು ಆದ ಶ್ರೀ ರವೀಂದ್ರ. ಡಿ. ಜಾಧವ ಮಾತನಾಡಿ ಈ ರೀತಿ ಹೇಳಿಕೆ ನೀಡಿದರು. ಈ ಸಂದರ್ಭದಲ್ಲಿ ಎಮ್ ಎ ಜಕಾತಿ ಅಧ್ಯಕ್ಷರು ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಕಿತ್ತೂರು, ರವೀಂದ್ರ ಡಿ ಜಾಧವ ಅಧ್ಯಕ್ಷರು ಕ. ರಾ.ಸ. ನೌ.ಎನ್.ಪಿ.ಎಸ್.ಸಂಘ ಕಿತ್ತೂರು ಮತ್ತು ಶಿಸ್ತು ಸಮಿತಿ ಕಾರ್ಯದರ್ಶಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘ ಬೆಳಗಾವಿ, ಈರಣ್ಣ ಕರಡಿ ಅಧ್ಯಕ್ಷರು ನೌಕರರ ಸಂಘ ಕಿತ್ತೂರು , ರವಿ ಯಲಗೌಡ್ರ ಉಪಾಧ್ಯಕ್ಷರು , ಗ್ರಾಮ ಆಡಳಿತ ಅಧಿಕಾರಿಗಳ ಸಂಘ.
ಉಳ್ಳಿಗೇರಿ ಕಾರ್ಯದರ್ಶಿ, ಮಂಜುನಾಥ ಹಂಚಿನಮನಿ ಸಂಘಟನಾ ಕಾರ್ಯದರ್ಶಿ, ಮಹಾಂತೇಶ ತಡಕೊಡ ಖಜಾಂಚಿ, ಗುರು ಬಂಡಿವಡ್ಡರ, ಅಶೋಕ ಪಟ್ಕಳ್, ಎಸ್ ಸಿ ಶಿದ್ದುನವರ, ಎಲ್ ಎಮ್ ಮಕಾನದಾರ, ಟಿ ಎಸ್ ಮಾಸೆಕರ, ಶ್ರೀದೇವಿ ಗಾಣಿಗೇರ, ಎಸ್ ಎನ್ ಪಟ್ಟಣಶೆಟ್ಟಿ ಗೌರವ ಅಧ್ಯಕ್ಷರು , ಎಮ್ ಜಿ ಪತ್ತಾರ, ಉಪಸ್ಥಿತರಿದ್ದರು.
ವರದಿ : ಜಗದೀಶ ಕಡೋಲಿ