Ad imageAd image

ಬೆಳಗಾವಿಯಲ್ಲಿ ಡಕೋಟ ಬಸ್ ಗಳ ಹೆಚ್ಚಳ

Bharath Vaibhav
ಬೆಳಗಾವಿಯಲ್ಲಿ ಡಕೋಟ ಬಸ್ ಗಳ ಹೆಚ್ಚಳ
WhatsApp Group Join Now
Telegram Group Join Now

——ನಿಲ್ದಾಣ ಸಮಸ್ಯೆಗಳು ಹಾಗೂ ಇಂಜಿನಿಯರ್ ಗಳ ಕೊರತೆ ಬಗ್ಗೆ ಅಧ್ಯಕ್ಷ ರಾಜು ಕಾಗೆ ಏನಂದ್ರು

ಬೆಳಗಾವಿ: ಹೌದು ಇಂದು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ವಾಯುವ್ಯ ಸಾರಿಗೆ ನಿಗಮ ಮಂಡಳಿ ಅಧ್ಯಕ್ಷ ರಾಜು ಕಾಗೆ ನೇತೃತ್ವದಲ್ಲಿ ಬೆಳಗಾವಿ ನಗರದಲ್ಲಿ ಇಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಜಿಲ್ಲಾ ವ್ಯಾಪ್ತಿಯ ಘಟಕಗಳು ಮತ್ತು ವಿಭಾಗಗಳ ಕುಂದು ಕೊರತೆ ಪರಿಶೀಲನಾ ಸಭೆಯನ್ನು ಹಮ್ಮಿಕೊಳ್ಳಲಾಯಿತು.

ಈ ವೇಳೆ ನೂತನ ಬಸ್ ಘಟಕ/ನಿಲ್ದಾಣಗಳ ಬೇಡಿಕೆ, ನೆಲಸಮಗೊಳಿಸಬೇಕಾದ ಶಿಥಿಲಾವಸ್ಥೆಯಲ್ಲಿರುವ ಬಸ್ ಘಟಕಗಳನ್ನು ಮರು ನಿರ್ಮಿಸುವುದು, ಹೊಸ ಬಸ್ ಗಳ ಬೇಡಿಕೆ ಹಾಗೂ ಹೊಸ ಮಾರ್ಗಗಳ ಬೇಡಿಕೆ ಹಾಗೂ ನೌಕರರ ಸಮಸ್ಯೆಗಳು ಹಾಗೂ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಅವುಗಳ ಪರಿಹಾರಕ್ಕಾಗಿ ಕೆಲವು ಮಹತ್ವದ ತೀರ್ಮಾನ ಕೈ ಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಹುಬ್ಬಳ್ಳಿ ಸಂಸ್ಥೆಯ ಎಂಡಿ ಶ್ರೀಮತಿ ಪ್ರಿಯಾಂಕಾ ಎಮ್. ಶ್ರೀ ಪೀರಸಾಬ ಕೈತಾಳ, ಶಾಸಕರಾದ ಶ್ರೀ ರಾಜು ಸೇಠ್, ಶ್ರೀ ವಿಶ್ವಾಸ ವೈದ್ಯ ಹಾಗೂ ಅಧಿಕಾರಿಗಳು ‌ಉಪಸ್ಥಿತರಿದ್ದರು. ನಂತರ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ನಡೆಸಿದ ಸಂವಾದದಲ್ಲಿ ಮಾತನಾಡಿದ ಅಧ್ಯಕ್ಷ ರಾಜು ಕಾಗೆ ಸಂಸ್ಥೆಯ ಸಮಸ್ಯೆಗಳು ಹಾಗೂ ಸಂಸ್ಥೆಯಲ್ಲಿ ಇಂಜಿನಿಯರ್ ಗಳ ಕೊರತೆ ಬಗ್ಗೆ ಮಾಹಿತಿ ನೀಡಿದರು.

ವರದಿ:  ಬಸವರಾಜು

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!