ಸೇಡಂ: ಮಂಗಳವಾರ ಸೇಡಂ ತಾಲೂಕಿನ ಮದನಾ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಜಯ ಕರ್ನಾಟಕ ಜನಪರ ವೇದಿಕೆ ಸಂಘಟನೆ ವತಿಯಿಂದ ಸಸಿ ಹೂವಿನ ಗಿಡ ನೆಡುವ ಕಾರ್ಯಕ್ರಮ ಗಡಿ ಭಾಗದಲ್ಲಿ ಕನ್ನಡ ಜಾಗೃತಿ ಮೂಡಿಸುವ ಕಾರ್ಯಕ್ರಮ ಮಾಡಲಾಯಿತು.

ಈ ಕಾರ್ಯಕ್ರಮದ ದಿವ್ಯ ಸಾನಿಧ್ಯ ಶ್ರೀ ಶರಣಯ್ಯ ಸ್ವಾಮಿ ಹಿರೇಮಠ ಮದನಾ ಸ್ವಾಮೀಜಿ ಯವರು ತಾಯಿ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಭೀಮಣ್ಣ ದೈಹಿಕ ಶಿಕ್ಷಕರು ಸ್ವಾಗತಿಸಿದರು, ಸರ್ಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಅರಣ್ಯ ಇಲಾಖೆ ಅಧಿಕಾರಿಗಳು ಕದೀರ್ ಅವರು ಪರಿಸರ ಮತ್ತು ಅರಣ್ಯ ಪ್ರದೇಶಗಳನ್ನು ರಕ್ಷಣೆ ಬಗ್ಗೆ ಮಾಹಿತಿ ನೀಡಿದರು, ಭೀಮಣ್ಣ ದೋರೆ ಎ.ಎಸ್.ಐ .ಮುಧೋಳ ಪೋಲೀಸ ಠಾಣೆ, ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾ ಉಪಾಧ್ಯಕ್ಷರು ವರದಾ ಸ್ವಾಮಿ ಬಿ ಹಿರೇಮಠ, ಗ್ರಾಮ ಪಂಚಾಯತ್ ಅಧ್ಯಕ್ಷರು ಚಂದ್ರಮ್ಮ ಅವರ ಮಗ ಅಶೋಕ್ ಹಡಪದ್, ಮತ್ತು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಶರಣ ಬಸಪ್ಪ, ಪ್ರಾಥಮಿಕ ಆರೋಗ್ಯಧಿಕಾರಿಗಳು ಡಾ.ಪ್ರಿಯಾಂಕ , ಸಿ.ಆರ್.ಪಿ ಈರಣ್ಣ ಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




