Ad imageAd image

ಬೆಂಕಿ ಅವಘಡದ ಗುಂಪುಗಳ ನಡುವೆ ಕಲ್ಲು ತೂರಾಟ : ಎಎಸ್ಪಿ ಕಾಲು ಮುರಿತ, ಬೆಂಗಳೂರಿಗೆ ಶಿಫ್ಟ್ 

Bharath Vaibhav
ಬೆಂಕಿ ಅವಘಡದ ಗುಂಪುಗಳ ನಡುವೆ ಕಲ್ಲು ತೂರಾಟ : ಎಎಸ್ಪಿ ಕಾಲು ಮುರಿತ, ಬೆಂಗಳೂರಿಗೆ ಶಿಫ್ಟ್ 
WhatsApp Group Join Now
Telegram Group Join Now

ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಸೈದಾಪೂರ್‌ನ ಗೋದಾವರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಬೆಂಕಿ ಅವಘಡದ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ಸಂಭವಿಸಿತು.

ಈ ಘಟನೆಯಲ್ಲಿ ಬಾಗಲಕೋಟೆ ಜಿಲ್ಲಾ ಆಡಿಷನಲ್ ಎಸ್‌ಪಿ (ಎಎಸ್ಪಿ) ಮಹಾಂತೇಶ್ವರ ಜಿದ್ದಿ ಅವರ ಕಾಲಿಗೆ ಕಲ್ಲು ಬಲವಾಗಿ ತಾಗಿ ಗಂಭೀರ ಗಾಯವಾದಿದ್ದು, ಕಾಲು ಪ್ರ್ಯಾಕ್ಚರ್ ಆಗಿದೆ.

ಕಲ್ಲು ತೂರಾಟ ನಡೆದ ವೇಳೆ ಪರಿಸ್ಥಿತಿ ನಿಯಂತ್ರಿಸಲು ತೊಡಗಿದ್ದ ಮಹಾಂತೇಶ್ವರ್ ಜಿದ್ದಿ ಅವರು ಉದ್ರಿಕ್ತ ಗುಂಪುಗಳ ಕಲ್ಲು ತೂರಾಟದಲ್ಲಿ ತೀವ್ರವಾಗಿ ಗಾಯಗೊಂಡರು.

ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ತಕ್ಷಣ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಹೆಚ್ಚಿನ ಚಿಕಿತ್ಸೆಗಾಗಿ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!