ಸಿಂಧನೂರು : ನ 28, 2026-27 ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಅನುಮೋದನೆ ಹಾಗೂ ಕ್ರಿಯಾ ಯೋಜನೆಗಾಗಿ ನಗರದ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಹಾಲ್ ಸಿದ್ದಪ್ಪ ಪೂಜಾರಿ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
30 ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 3497 ರಷ್ಟು ಕಾಮಗಾರಿಗಳಿಗೆ 330 ಕೋಟಿ ಗುರಿ ಹೊಂದಲಾಗಿದ್ದು ಎಲ್ಲಾ ಅಧಿಕಾರಿಗಳು ಸರಿಯಾದ ಅಂಕಿ ಅಂಶಗಳನ್ನು ಕೊಡಿ, ತಪ್ಪಿದಲ್ಲಿ ಅನುದಾನ ಸಿಗುವುದು ಕಷ್ಡಕರ ನೀವು ಸರಿಯಾಗಿ ಅಂಕಿ ಅಂಶಗಳನ್ನು ಕೊಟ್ಟಾಗ ಮಾತ್ರ ಜಿಲ್ಲಾ ಅಭಿವೃದ್ಧಿ ಯೋಜನಾ ಸಮಿತಿಯು ಸಕರತ್ಮಾಕವಾಗಿ ಸ್ಪಂದಿಸುತ್ತದೆ ಇಲ್ಲದಿದ್ದರೆ ಅನುದಾನ ಸಿಗುವುದಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದರು.

ಈ ವಾರ್ಷಿಕ ಕರಡು ಅಭಿವೃದ್ಧಿ ಯೋಜನಾ ಸಭೆಯಲ್ಲಿ ಕೆಲವು ಅಧಿಕಾರಿಗಳು ಗೈರು ಹಾಜರಿದ್ದ ಕೆಲವು ಅಧಿಕಾರಿಗಳು ಮೊಬೈಲ್ ನಲ್ಲಿ ಬಿಜಿ ಆಗಿರುವುದು ಕಂಡು ಬಂದಿದ್ದು ಅಭಿವೃದ್ಧಿಯ ಮುನ್ಸೂಚನೆ ಎಂದರು.
ಈ ವೇಳೆತಾಲೂಕ ಪಂಚಾಯಿತಿ ಇಓ,ನಗರ ಸಭೆ ಪೌರಾಯುಕ್ತ ಪಾಂಡುರಂಗ ಇಟಗಿ ಸಭೆಯಲ್ಲಿ ಇದ್ದರು




