Ad imageAd image

ಎ. ಬಿ. ವಿ. ಪಿ.ಈಶಾನ್ಯ ಭಾರತದಿಂದ ಬಾದಾಮಿಗೆ ಆಗಮಿಸಿದ ಭಾರತ ಏಕಾತ್ಮಕ ಯಾತ್ರೆ 2025:

Bharath Vaibhav
ಎ. ಬಿ. ವಿ. ಪಿ.ಈಶಾನ್ಯ ಭಾರತದಿಂದ ಬಾದಾಮಿಗೆ ಆಗಮಿಸಿದ ಭಾರತ ಏಕಾತ್ಮಕ ಯಾತ್ರೆ 2025:
WhatsApp Group Join Now
Telegram Group Join Now

ಬಾದಾಮಿ: ಈಶಾನ್ಯ ಭಾರತ ಎ. ಬಿ. ವಿ. ಪಿ. ಯಿಂದ ಒಂದು ದೇಶ ಒಂದು ರಾಷ್ಟ್ರದ ಬಗ್ಗೆ ಪರಿಕಲ್ಪನೆ ಮೂಡಿಸುವ ಹಾಗೂ ದೇಶದ ಇತಿಹಾಸವನ್ನು ಕೂಡ ಸಾರಲು ಈಶಾನ್ಯ ರಾಜ್ಯದಿಂದ ಎ. ಬಿ ವಿ ಪಿ 8 ತಂಡಗಳು ದೇಶದೆಲ್ಲೆಡೆ ಸಂಚರಿಸುತ್ತಿವೆ.

ಕೋಟೆ ನಗರಿ ಬಾಗಲಕೋಟೆ ಜಿಲ್ಲೆಗೆ 3 ದಿನಗಳವರೆಗೆ ಇಲ್ಲಿ ಸಂಚರಿಸಿ ಇಲ್ಲಿನ ಚಾಲುಕ್ಯ ಅರಸರ ಬಗ್ಗೆ ಅವರ ಆಳ್ವಿಕೆಯ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲು ಬಾದಾಮಿಯ ಮಯೂರ ಚಾಲುಕ್ಯ ಹೋಟೆಲ್ ಗೆ ಬಂದು ತಂಗಿದರು.

ಈಶಾನ್ಯ ಎ. ಬಿ. ವಿ. ಪಿ. ವಿದ್ಯಾರ್ಥಿಗಳ ತಂಡವನ್ನು ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎಸ್. ಡಿ. ಜೋಗಿನ, ಹಾಗೂ ಆಮ್ ಆದ್ಮಿ ಪಕ್ಷದ ಬಾಗಲಕೋಟೆ ಜಿಲ್ಲಾಧ್ಯಕ್ಷರು ಹಾಗೂ ತೆರಿಗೆ ಸಲಹೆದಾರರಾದ ಆನಂದ್ ದೇವಾಡಿಗ, ಹಾಗೂ ಎ. ಬಿ. ವಿ. ಪಿ. ಕಾರ್ಯಕರ್ತರು ಮತ್ತು ಬಿ. ಜೆ. ಪಿ. ಯ ಯುವ ಧುರೀಣರಾದ ಪ್ರಭುರಾಜ್ ಹೂಲಗೇರಿ ಮತ್ತು ಮಯೂರ ಚಾಲುಕ್ಯ ಹೋಟೆಲ್ ನ ಪ್ರಧಾನ ವ್ಯವಸ್ಥಾಪಕಿಯರಾದ ಪ್ರೀತಿ ಅಯ್ಯಪ್ಪ ಹಾಗೂ ಪತ್ರಕರ್ತರಾದ ಮುತ್ತಣ್ಣ ಯರಗೊಪ್ಪ ತಂದಕ್ಕೆ ಹೂಗುಚ್ಚ ನೀಡಿ ಸ್ವಾಗತ ಮಾಡಿಕೊಂಡರು.

ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಎಸ್. ಡಿ. ಜೋಗಿನ ಅವರು ಚಾಲುಕ್ಯರ ಅರಸರ ಕಾಲದ ವಿವರಣೆಯನ್ನು ವಿದ್ಯಾರ್ಥಿಗಳಿಗೆ ವಿವರಿಸಿ ಮನವರಿಕೆ ಮಾಡಿಕೊಟ್ಟರು.

ವರದಿ:- ರಾಜೇಶ್. ಎಸ್. ದೇಸಾಯಿ

WhatsApp Group Join Now
Telegram Group Join Now
Share This Article
error: Content is protected !!