Ad imageAd image

ಬಾಲಕಿಯ ಕೆನ್ನೆಗೆ ಬಿಸಿ ಚಮಚದಿಂದ ಬರೆಯಿಟ್ಟ ಅಂಗನವಾಡಿ ಸಹಾಯಕಿ

Bharath Vaibhav
ಬಾಲಕಿಯ ಕೆನ್ನೆಗೆ ಬಿಸಿ ಚಮಚದಿಂದ ಬರೆಯಿಟ್ಟ ಅಂಗನವಾಡಿ ಸಹಾಯಕಿ
WhatsApp Group Join Now
Telegram Group Join Now

ಬಾಗಲಕೋಟೆ : ಬಾಗಲಕೋಟೆಯಲ್ಲಿ ಅಮಾನವೀಯ ಘಟನೆ ನಡೆದಿದ್ದು ಕ್ಷುಲ್ಲಕ ಕಾರಣಕ್ಕೆ ಬಾಲಕಿಯ ಕೆನ್ನೆಗೆ ಬಿಸಿ ಚಮಚದಿಂದ ಬರೆಯಿಟ್ಟು ಅಂಗನವಾಡಿ ಸಹಾಯಕಿ ಕ್ರೂರತ್ವ ಮೆರೆದಿದ್ದಾಳೆ.

ಈ ಹಿನ್ನೆಲೆಯಲ್ಲಿ ಕೂಡಲೇ ಅಂಗನವಾಡಿ ಸಹಾಯಕಿಯನ್ನು ಅಮಾನತು ಮಾಡಲಾಗಿದೆ.ಈ ಒಂದು ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಅಂಗನವಾಡಿಯಲ್ಲಿ ನಡೆದಿದೆ.

ಬಾಲಕಿಯ ಕೆನ್ನೆಗೆ ಸಹಾಯಕಿ ಅನ್ನದ ಚಮಚದಿಂದಬರೆಹಾಕಿದ ಅಮಾನವೀಯ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಗುಲಗಾಲಜಂಬಗಿ ಗ್ರಾಮದ ಅಂಗನವಾಡಿಯಲ್ಲಿ ನಿನ್ನೆ ನಡೆದಿದೆ.

ಬರೆಯಿಂದ ಪ್ರೀತಿ ಎಂಬ ಬಾಲಕಿಯ ಕೆನ್ನೆಗೆ ಗಾಯವಾಗಿದೆ. ಅಂಗನವಾಡಿ ಕಾರ್ಯಕರ್ತೆ ಶೋಭಾ, ಸಹಾಯಕಿ ಶಾರವ್ವಅವರನ್ನು ತಕ್ಷಣ ಅಮಾನತುಗೊಳಿಸಿ ಸಿಡಿಪಿಒ ಕಾಶಿಬಾಯಿ ಆದೇಶಿಸಿದ್ದಾರೆ. ಬರೆ ಹಾಕಿದ್ದಕ್ಕೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ.

WhatsApp Group Join Now
Telegram Group Join Now
Share This Article
error: Content is protected !!