ಸೇಡಂ: ತಾಲೂಕಿನ ರೇಂಜೋಳ ಗ್ರಾಮದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಬಾಲಕರ ವಸತಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸೌಕರ್ಯಗಳು ಒದಗಿಸದೇ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕರ್ಣಾಟಕ ನವ ನಿರ್ಮಾಣ ಸೇನೆ ತಾಲೂಕ ಘಟಕ ವತಿಯಿಂದ ಮಾನ್ಯ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸೇಡಂ ರವರಿಗೆ ಮನವಿ ಪತ್ರ ಸಲ್ಲಿಸಿದರು.
ಡಾ. ಬಿ.ಆರ್, ಅಂಬೇಡ್ಕರ್ ವಸತಿ ನಿಲಯ ರಂಜೊಳದ ವಾರ್ಡನ್ ಮತ್ತು ಸೂಪರವೈಜರ್ ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ ಹಾಗೆ ವಸತಿ ನಿಲಯದಲ್ಲಿ ಜನರೇಟರ್ ಇದ್ದರೂ ರಾತ್ರಿ ಸಮಯದಲ್ಲಿ ಲೈಟ್ ಇಲ್ಲದ ಸಮಯದಲ್ಲಿ ಬಳಸುತ್ತಿಲ್ಲ ಕಾರಣ ಅದಕ್ಕೆ ಎಣ್ಣೆ ಹಾಕುತ್ತಿಲ್ಲ ಎಂದು ತಿಳಿದಿರುತ್ತದೆ ಇದರಿಂದ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದೆ.
ಮತ್ತು ನಿಯಮದ ಪ್ರಕಾರ ಮತ್ತು ಪ್ರಮಾಣದ ಪ್ರಕಾರ ವಿದ್ಯಾರ್ಥಿಗಳಿಗೆ ಊಟ ನೀಡುತ್ತಿಲ್ಲ, ಕುಡಿಯಲು ಶುದ್ಧವಾದ ನೀರು ಇರುವುದಿಲ್ಲ, ಸ್ನಾನ ಮಾಡಲು ನೀರು ಕಲುಷಿತವಾಗಿರುತ್ತವೆ, ಅದರಿಂದ ಕೆಲ ವಿದ್ಯಾರ್ಥಿಗಳಿಗೆ ಚರ್ಮ ರೋಗ ಬಂದಿರುತ್ತದೆ ಇದು ಎಲ್ಲಾ ವಿದ್ಯಾರ್ಥಿಗಳಿಗೆ ಹರಡುವ ಸಾಧ್ಯತೆಯಿದೆ, ಮತ್ತು ವಸತಿ ನಿಲಯದಲ್ಲಿ ಕಿಟಕಿಗಳಿಗೆ ಸರಿಯಾದ ಮುಚ್ಚನೆ ಇರುವುದಿಲ್ಲ, ಫ್ಯಾನ್ ಇದ್ದರೂ ಚಾಲು ಆಗುತ್ತಿಲ್ಲ ಎಂದು ಇಂತಹ ಅನೇಕ ಸಮಸ್ಯೆಗಳಿಗೆ ವಸತಿ ನಿಲಯದ ಅಧಿಕಾರಿಗಳು ಕಾರಣಭೂತರಾಗಿದ್ದು ಅವರನ್ನು ತಕ್ಷಣವೇ ಅಮಾನತು ಮಾಡಬೇಕೆಂದು ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕ ಅಧ್ಯಕ್ಷರಾದ ಭೀಮಾಶಂಕರ ಕೊರವಿ ಅವರು ಈ ಸಂದರ್ಭದಲ್ಲಿ ಮಾತನಾಡಿ ಆಗ್ರಹ ವ್ಯಕ್ತಪಡಿಸಿದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್