Ad imageAd image

ರಾಜ್ಯದಲ್ಲಿ ಈ ಬಾರಿ ಸಿಡಿಲು ಸಾವುಗಳು ಹೆಚ್ಚಳ

Bharath Vaibhav
ರಾಜ್ಯದಲ್ಲಿ ಈ ಬಾರಿ ಸಿಡಿಲು ಸಾವುಗಳು ಹೆಚ್ಚಳ
WhatsApp Group Join Now
Telegram Group Join Now

ತ್ತರ ಕರ್ನಾಟಕದ ಕಲಬುರಗಿಯಲ್ಲಿ ಅತಿ ಹೆಚ್ಚು ಸಿಡಿಲು ಸಂಬಂಧಿ ಸಾವುಗಳಾಗಿವೆ. ನಂತರದ ಸ್ಥಾನದಲ್ಲಿ ಯಾದಗಿರಿ, ವಿಜಯಪುರ, ಗದಗ ಮತ್ತು ಬೆಳಗಾವಿ ಇವೆ. ಪೂರ್ವ ಮಾನ್ಸೂನ್ ಮತ್ತು ಮಾನ್ಸೂನ್ ಋತುಗಳಲ್ಲಿ ಸಿಡಿಲು ಬೀಳುವುದು ಸಾಮಾನ್ಯವಾಗಿದೆ. ಸ್ಥಳ-ನಿರ್ದಿಷ್ಟ ಮಿಂಚಿನ ಎಚ್ಚರಿಕೆಗಳನ್ನು ನೀಡಲು ಕೆಎಸ್‌ಎನ್‌ಡಿಎಂಸಿ ಮತ್ತು ಕಂದಾಯ ಇಲಾಖೆ ಏಪ್ರಿಲ್ 2018ರಲ್ಲಿ ಸಿಡಿಲು ಆ್ಯಪ್​ ಅನ್ನು ಪ್ರಾರಂಭಿಸಿತ್ತು.

ಸಿಡಿಲು ಬಡಿಯುವುದು ಎಂದರೆ ಏನು?: ಗುಡುಗುಸಹಿತ ಮಳೆಯೊಳಗೆ ಸ್ಥಿರ ವಿದ್ಯುತ್ ಸಂಗ್ರಹ ಮತ್ತು ವಿಸರ್ಜನೆಯ ಮೂಲಕ ಸಿಡಿಲು ರೂಪುಗೊಳ್ಳುತ್ತದೆ. ಗಾಳಿಯ ಪ್ರವಾಹಗಳು ಮೋಡದೊಳಗೆ ಪಾಸಿಟಿವ್​ ಮತ್ತು ನೆಗೆಟಿವ್​ ಕಣಗಳ ಪ್ರತ್ಯೇಕತೆಯನ್ನು ಉಂಟುಮಾಡುತ್ತವೆ. ಪಾಸಿಟಿವ್​ ಕಣಗಳು ಮೇಲ್ಭಾಗದಲ್ಲಿ ಸಂಗ್ರಹವಾಗುತ್ತವೆ. ನೆಗೆಟಿವ್​ ಕಣಗಳು ಕೆಳಭಾಗದಲ್ಲಿರುತ್ತವೆ. ಈ ಕಣಗಳು ಒಟ್ಟಿಗೆ ಸೇರಿದಾಗ ಮತ್ತು ವಿದ್ಯುತ್ ಕ್ಷೇತ್ರವು ಸಾಕಷ್ಟು ಪ್ರಬಲವಾದಾಗ ಅದು ಗಾಳಿಯ ನಿರೋಧಕ ಗುಣಲಕ್ಷಣಗಳನ್ನು ಮೀರಿಸುತ್ತದೆ. ಇದರ ಪರಿಣಾಮವೇ ಸಿಡಿಲು.

ಸಾವು ಸಂಭವಿಸಲು ಕಾರಣವೇನು?: ಸಿಡಿಲು ಬಡಿದು ಸಾವುಗಳು ಪ್ರಾಥಮಿಕವಾಗಿ ಹೃದಯ ಮತ್ತು ಉಸಿರಾಟದ ಸ್ತಂಭನದಿಂದ ಉಂಟಾಗುತ್ತವೆ. ಆಗಾಗ್ಗೆ ತೀವ್ರವಾದ ವಿದ್ಯುತ್ ಪ್ರವಾಹ ಹೃದಯ ಮತ್ತು ಶ್ವಾಸಕೋಶಗಳಿಗೆ ಹಾನಿ ಮಾಡುತ್ತದೆ. ಈ ಸಿಡಿಲು ಗಂಭೀರ ಗಾಯಗಳು ಮತ್ತು ಸುಟ್ಟಗಾಯಗಳಿಗೂ ಕಾರಣವಾಗಬಹುದು.

ಹೃದಯ ಸ್ತಂಭನಮಿಂಚಿನ ಹೊಡೆತದಿಂದ ಬರುವ ವಿದ್ಯುತ್ ಪ್ರವಾಹವು ಹೃದಯದ ಚಟುವಟಿಕೆಯನ್ನು ಅಡ್ಡಿಪಡಿಸಬಹುದು. ಇದು ಅಸಿಸ್ಟೋಲ್ (ಹೃದಯ ಬಡಿತವಿಲ್ಲ) ಅಥವಾ ಕುಹರದ ಕಂಪನ (ವೇಗದ, ಅನಿಯಮಿತ ಹೃದಯ ಬಡಿತ) ನಂತಹ ಘಟನೆಗಳಿಗೆ ಕಾರಣವಾಗಬಹುದು. ಇದು ಹೃದಯ ಸ್ತಂಭನಕ್ಕೆ ಕಾರಣವಾಗಬಹುದು.

WhatsApp Group Join Now
Telegram Group Join Now
Share This Article
error: Content is protected !!