ಚಿಕ್ಕೋಡಿ ಸುದ್ದಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮ ವಾದ ಮಹಿಳಾ ಶಾಖೆಯ ಅದ್ದೂರಿಯಲ್ಲಿ ಉದ್ಘಾಟನೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಚಿಕ್ಕೋಡಿ ಜಿಲ್ಲೆಯ ನಾಗರಾಳ ಗ್ರಾಮದ ಮಹಿಳಾ ಘಟಕದ ಗ್ರಾಮ ಶಾಖೆಯನ್ನು ಅತಿ ಅದ್ದೂರಿಯಾಗಿ ಉದ್ಘಾಟನೆ ಮಾಡಲಾಯಿತು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ರಾಜ್ಯ ಸಂಘಟನಾ ಸಂಚಾಲಕಿ ಮಹಿಳಾ ಒಕ್ಕೂಟ ಶ್ರೀಮತಿ ಸವಿತಾ ಆಸೋದೆ ಅವರು ಕಾರ್ಯಕ್ರಮದ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು ರಾಜ್ಯ ಸಮಿತಿ ಸದಸ್ಯರಾದ ರಾಘವೇಂದ್ರ ಸಿಂಪಿ ಅವರು ಅಧ್ಯಕ್ಷತೆ ವಹಿಸಿದ್ದರು.
ಚಿಕ್ಕೋಡಿ ಜಿಲ್ಲಾ ಸಂಚಾಲಕರಾದ ಮುತ್ತಣ್ಣ ರಾಯಣ್ಣನವರ ಅವರು (ಭೀಮವಾದ) ಮಹಿಳಾ ಘಟಕದ ನಾಮಫಲಕವನ್ನು ಉದ್ಘಾಟಿಸಿದರು.
ನಾಗರಾಳ ಗ್ರಾಮ ಸಂಚಾಲಕಿಯಾಗಿ
ಶ್ರೀಮತಿ.ಶಿಂದು ರಮೇಶ್ ಶಿಂಗೆ,
ಗ್ರಾಮ ಸಂಘಟನಾ ಸಂಚಾಲಕಿಯಾಗಿ ಶ್ರೀಮತಿ ರೇಖಾ ಸಹದೇವ್ ಕಾಂಬಳೆ, ಸಂಘಟನಾ ಸಂಚಾಲಕಿಯಾಗಿ ಶ್ರೀಮತಿ ಗೀತಾ ಗೌತಮ್ ಶಿಂಗೆ, ಶ್ರೀಮತಿ ಸುರೇಖಾ ಗೋಪಾಲ ಅಸೋದೆ ಗ್ರಾಮ ಖಜಾಂಚಿಯಾಗಿ, ಶ್ರೀಮತಿ ಅಲಕ ವಿಕ್ರಂ ಶಿಂಗೆ ಅವರನ್ನು ಆಯ್ಕೆ ಮಾಡಲಾಯಿತು.
ವಿದ್ಯಾರ್ಥಿ ಒಕ್ಕೂಟದ ಜಿಲ್ಲಾ ಸಂಚಾಲಕರಾದ ಉದಯ ಮಾಳಗೇ.
ಜಿಲ್ಲಾ ಸಂಘಟನಾ ಸಂಚಾಲಕರಾದ ಸಚಿನ್ ಗಟ್ಟಿ. ತಾಲೂಕ ಸಂಚಾಲಕರಾದ ಶಿವು ಮದಾಳೆ,ಹುಕ್ಕೇರಿ ತಾಲೂಕಿನ ಮಹಿಳಾ ಒಕ್ಕೂಟದ ಸಂಚಾಲಕೀ ಶ್ರೀಮತಿ ಶಾಂತಾ ಸಂಗನೂರೆ, ತಾಲೂಕ ಸಂಘಟನಾ ಸಂಚಾಲಕರಾದ ಶ್ರೀಧರ್ ಕಾಂಬಳೆ,
ನೂರಾರು ಕಾರ್ಯಕರ್ತರು ಪದಾಧಿಕಾರಿಗಳು ಉಪಸ್ಥಿತರಿದ್ದರು.
ಗ್ರಾಮ ಘಟಕದ ಕಾರ್ಯಕ್ರಮವನ್ನು ಯಶಸ್ವಿ ಮಾಡಿದ್ದಕ್ಕೆ ನಾಗರಾಳ ಗ್ರಾಮದ ಗುರು ಹಿರಿಯರಿಗೆ ಮಹಿಳಾ ಪದಾಧಿಕಾರಿಗಳಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ವತಿಯಿಂದ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು.
ವರದಿ : ರಾಜು ಮುಂಡೆ