Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಾಹನ ಸವಾರರಿಗೆ ಮತ್ತೆ ಶಾಕ್ : ಸಿಎನ್‌ಜಿ ದರ 2 ರೂಪಾಯಿ ಹೆಚ್ಚಳ 

Advertisement

ನವದೆಹಲಿ : ವಾಹನ ಸವಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿಯಷ್ಟು ಹೆಚ್ಚಳ ಮಾಡಿದೆ.

 ವಿಶೇಷವೆಂದರೆ, ಇದೇ ವಾರದಲ್ಲೇ ಸಿಎನ್‌ಜಿ ದರವನ್ನು 2 ರೂಪಾಯಿ ಹೆಚ್ಚಿಸಲಾಗಿತ್ತು, ಇದೀಗ ಮತ್ತೊಮ್ಮೆ ಬೆಲೆ ಏರಿಕೆ ಮಾಡಲಾಗಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಹನ ಸವಾರರಿಗೆ ಮತ್ತೊಮ್ಮೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ದೆಹಲಿಯಲ್ಲಿ ಸಂಕುಚಿತ ನೈಸರ್ಗಿಕ ಅನಿಲ (CNG) ಬೆಲೆಯನ್ನು ಪ್ರತಿ ಕೆಜಿಗೆ 2 ರೂಪಾಯಿ ಹೆಚ್ಚಿಸಲಾಗಿದೆ. ಈ ಹೊಸ ಏರಿಕೆಯೊಂದಿಗೆ ದೆಹಲಿಯಲ್ಲಿ ಸಿಎನ್‌ಜಿ ದರ ಈಗ ಪ್ರತಿ ಕೆಜಿಗೆ ₹83.09 ಕ್ಕೆ ತಲುಪಿದೆ.

ಇಂದ್ರಪ್ರಸ್ಥ ಗ್ಯಾಸ್ ಲಿಮಿಟೆಡ್ (IGL) ಈ ಪರಿಷ್ಕೃತ ದರಗಳನ್ನು ಜಾರಿಗೆ ತಂದಿದ್ದು, ಇತ್ತೀಚಿನ ದಿನಗಳಲ್ಲಿ ಸರಣಿ ದರ ಏರಿಕೆ ಕಾಣುತ್ತಿರುವುದು ವಾಹನ ಚಾಲಕರು ಮತ್ತು ಸಾರ್ವಜನಿಕ ಸಾರಿಗೆ ಅವಲಂಬಿತರ ಜೇಬಿಗೆ ಕತ್ತರಿ ಹಾಕಿದಂತಾಗಿದೆ.

ಆಟೋ, ಟ್ಯಾಕ್ಸಿ ಹಾಗೂ ವಾಣಿಜ್ಯ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಲಿದ್ದು, ಪ್ರಯಾಣ ದರವೂ ದುಬಾರಿಯಾಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಇಂಧನ ದರ ಏರಿಕೆ ಮತ್ತು ನೈಸರ್ಗಿಕ ಅನಿಲದ ಆಮದು ವೆಚ್ಚ ಹೆಚ್ಚಾಗಿರುವುದು ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎಂದು ಹೇಳಲಾಗಿದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವಾಹನ ಸವಾರರಿಗೆ ಮತ್ತೆ ಶಾಕ್ : ಸಿಎನ್‌ಜಿ ದರ 2 ರೂಪಾಯಿ ಹೆಚ್ಚಳ ರಾಯಚೂರಿನಲ್ಲಿ ಸಿಲಿಂಡರ್ ತೀವ್ರ ಕೊರತೆ: ಎರಡು ಹಗಲು ಮತ್ತು ಎರಡು ರಾತ್ರಿಗಳಿಂದ ಕಾಯುವ ದುಸ್ಥಿತಿ ತಮಿಳುನಾಡು ರೈತರಿಗೆ ಸಿಎಂ ವಿಜಯ ಸಿಹಿಸುದ್ದಿ : 50 ಸಾವಿರವರೆಗಿನ ಸಾಲ ಮನ್ನಾ  ಘೋಷಣೆ ಮಹಿಳೆಯರ ಟ್ವೆಂಟಿ-೨೦ ವಿಶ್ವಕಪ್ ಪಂದ್ಯಾವಳಿ ಜೂನ್ ೧೨ ರಿಂದ ಆರಂಭಪ್ಲೇ ಪಂದ್ಯಗಳು ನಡೆಯುವುದು ಹೀಗೆ ಆರ್‌ಸಿಬಿ- ಗುಜರಾತ್ ಟೈಟನ್ಸ್ ಪಂದ್ಯ ನಾಳೆವರ್ಷಗಳೇ ಉರುಳಿದರೂ ಡಾಂಬರ್ ಕಾಣದ ರಸ್ತೆ.ಇದೇ 26ರಂದು ಬೆಳಗಾವಿ ಮಹಾನಗರ ಪಾಲಿಕೆ ಕಚೇರಿಗೆ ಕನ್ನಡಪರ ಸಂಘಟನೆಗಳ ಮುತ್ತಿಗೆಬಾಗಲಕೋಟೆ ಜಿಲ್ಲೆಯ ಬಕ್ರೀದ್ ಹಿನ್ನೆಲೆ ಗೋಹತ್ಯೆ ತಡೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹ ಹರ್ಮನ್‌ಪ್ರೀತ್ ಕೌರ್ ಅವರಿಗೆ 'ಪದ್ಮಶ್ರೀ' ಪ್ರಶಸ್ತಿ ಪ್ರದಾನ