LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
Politics News

ಆರ್‌ ಅಶೋಕ್‌ ನಿವಾಸದ ಬಳಿ 'ED - BJP ಭಾಯಿ ಭಾಯಿ' ಪೋಸ್ಟರ್‌ಗಳ ಪ್ರತ್ಯಕ್ಷ 

Advertisement

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜಾಲಹಳ್ಳಿ ಹಾಗೂ ಹೆಚ್‌ಎಂಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಡಿ ದಾಳಿಯ ಬಗ್ಗೆ (ED Raid) ಶನಿವಾರ ಬೆಳಿಗ್ಗೆ ದಿಢೀರನೆ ಕಂಗೊಳಿಸಿರುವ ಕೆಲವು ಪೋಸ್ಟರ್‌ಗಳು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸಿವೆ.

"ED - BJP ಭಾಯಿ ಭಾಯಿ" ಎಂಬ ಸಾಲುಗಳುಳ್ಳ ಈ ಪೋಸ್ಟರ್‌ಗಳು ಸಾರ್ವಜನಿಕರ ಹಾಗೂ ಹಾದುಹೋಗುವ ವಾಹನ ಸವಾರರ ಗಮನ ಸೆಳೆಯುತ್ತಿದ್ದು, ಸ್ಥಳೀಯವಾಗಿ ಭಾರಿ ಚರ್ಚೆಗೆ ಗ್ರಾಸವಾಗಿವೆ.

ವಿಶೇಷವೆಂದರೆ, ಈ ಪೋಸ್ಟರ್‌ಗಳು ಪ್ರತ್ಯಕ್ಷವಾಗಿರುವ ಜಾಲಹಳ್ಳಿ ಭಾಗದಲ್ಲಿಯೇ ಜಾರಿ ನಿರ್ದೇಶನಾಲಯದ (ED) ಪ್ರಾದೇಶಿಕ ಕಚೇರಿ ಇದೆ.

ಅಲ್ಲದೆ, ಇದೇ ವ್ಯಾಪ್ತಿಯಲ್ಲಿ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್ ಅವರ ನಿವಾಸವೂ ಇರುವುದು ಈ ವಿದ್ಯಮಾನಕ್ಕೆ ಮತ್ತಷ್ಟು ಪ್ರಮುಖ ರಾಜಕೀಯ ಆಯಾಮವನ್ನು ನೀಡಿದೆ.

ಕೇಂದ್ರ ತನಿಖಾ ಸಂಸ್ಥೆಗಳ ವಿರುದ್ಧ ಸರಣಿ ಪ್ರಶ್ನೆಗಳು

ರಸ್ತೆಬದಿಯ ಗೋಡೆಗಳು ಹಾಗೂ ಪ್ರಮುಖ ವೃತ್ತಗಳಲ್ಲಿ ರಾರಾಜಿಸುತ್ತಿರುವ ಈ ಪೋಸ್ಟರ್‌ಗಳಲ್ಲಿ ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಲಾಗಿದೆ.

 ರಾಜಕೀಯವಾಗಿ ಎದುರಿಸಲು ಸಾಧ್ಯವಾಗದ ವಿಪಕ್ಷ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯದ (ED) ತನಿಖೆಗಳನ್ನು ಕೇವಲ ರಾಜಕೀಯ ಅಸ್ತ್ರವಾಗಿ ಬಳಸಿಕೊಳ್ಳಲಾಗುತ್ತಿದೆಯೇ ಎಂಬ ಕಠಿಣ ಪ್ರಶ್ನೆಯನ್ನು ಪೋಸ್ಟರ್‌ಗಳಲ್ಲಿ ಎತ್ತಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST