Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅತ್ತು ಕರೆದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ : ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯ

Advertisement

ಬೆಂಗಳೂರು : ಅತ್ತು ಕರೆದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆದರೆ ಬಂದೇಯ ಗವಾಕ್ಷಿ ಅಂತ ಅಷ್ಟೇ. ಸಿದ್ದರಾಮಯ್ಯ ಹೋಗಿ ಡಿಕೆ ಶಿವಕುಮಾರ್ ಬಂದ್ರು ಅಷ್ಟೇ 2028 ರಲ್ಲಿ ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಎಂದು ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯವಾಡಿದರು.

ಮೈಸೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾಳೆ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ ಅದರ ಬಗ್ಗೆ ಆಸಕ್ತಿ ಇಲ್ಲ ಕಾಂಗ್ರೆಸ್ಸಿನ ಕಥೆ ಹೆಂಗಾಗಿದೆ ಎಂದರೆ ಹೋದೆಯಾ ಪಿಶಾಚಿ ಎಂದರೆ ಬಂದೆಯ ಗವಾಕ್ಷಿ ಎಂಬಂತೆ ಆಗಿದೆ.

ಕರ್ನಾಟಕದಲ್ಲಿ ದಲಿತರನ್ನು ವೋಟ್ ಮಾಡಿಕೊಂಡು ಇವತ್ತು ಸಿಎಂ ಮಾಡುತ್ತೇವೆ, ನಾಳೆ ಮಾಡುತ್ತೇವೆ ಇನ್ನೊಂದು ಚುನಾವಣೆ ಬಂದರೆ ಮುಖ್ಯಮಂತ್ರಿ ಅಂತ ಮಾಡುತ್ತೇವೆ ಎಂದು ಹೇಳಿ ವಂಚನೆ ಮಾಡಿದ್ದಾರೆ.

ಕಾಂಗ್ರೆಸ್ ನಲ್ಲಿ ಇರುವ ದಲಿತ ಲೀಡರ್ ಗಳಿಗೆ ತಾಕತ್ತಿಲ್ಲ. ಎಷ್ಟು ದಿನ ವಂಚನೆ ಮಾಡುತ್ತೀರಾ ನಾವು ಮುಖ್ಯಮಂತ್ರಿ ಆಗುತ್ತೇವೆ ಎಂದು ಕೇಳುವ ತಾಕತ್ತು ಇಲ್ಲ. ದಲಿತರಿಗೆ ಕಾಂಗ್ರೆಸ್ ಭಗಣಿಗೂಟ ಇಟ್ಟಿದೆ.

ನಾಚಿಕೆ ಆಗಲ್ವಾ ನಿಮಗೆ ಇನ್ನೂ ಕಾಂಗ್ರೆಸ್ ಪಕ್ಷದಲ್ಲಿಯೇ ಇರಬೇಕಾ? ದಲಿತರನ್ನು ಈ ಬಾರಿ ಮುಖ್ಯಮಂತ್ರಿ ಮಾಡದೆ ಹೋದರೆ ರಾಜ್ಯದ ಹಿಂದುಳಿದ ದಲಿತ ವರ್ಗಗಳಿಗೆ ಸ್ವಾಭಿಮಾನ ಅನ್ನುವುದು ಕಿಂಚಿತ್ತಾದರು ಇದ್ದರೆ ಯಾರೂ ಕೂಡ ಮುಂದಿನ ಸಚಿವ ಸಂಪುಟದಲ್ಲಿ ಯಾರು ಕೂಡ ಸ್ಥಾನಗಳನ್ನು ಪಡೆಯಬಾರದು. ಎಲ್ಲರೂ ಕೂಡ ದಲಿತ ಸಮುದಾಯಗಳು ಕಾಂಗ್ರೆಸ್ಗೆ ಉತ್ತರ ಕೊಡಿ ಎಲ್ಲರೂ ಕೂಡ ಕಾಂಗ್ರೆಸ್ ಮಾಡುವ ಮೋಸಕ್ಕೆ ಕಾಂಗ್ರೆಸ್ ಅನ್ನು ತಿರಸ್ಕರಿಸಬೇಕು ಎಂದು ತಿಳಿಸಿದರು.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಮೇ 31ಕ್ಕೆ 'ತಂಬಾಕು ರಹಿತ ದಿನ' ಶಿಬಿರಸಿಎಂ ಬದಲಾವಣೆ, ನಾಳೆ' ಮಾತನಾಡುತ್ತೇನೆ ಎಂದ ಸಿದ್ದರಾಮಯ್ಯ ಅತ್ತು ಕರೆದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ : ಛಲವಾದಿ ನಾರಾಯಣಸ್ವಾಮಿ ವ್ಯಂಗ್ಯರಾಜ್ಯದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ : ಬಿ. ವೈ ವಿಜಯೇಂದ್ರ ವೀರಭದ್ರೇಶ್ವರ, ಬಸವೇಶ್ವರ್ ಏತ ನೀರಾವರಿ ಶೀಘ್ರದಲ್ಲಿ ರೈತರಿಗೆ ಪರಿಹಾರ ಶಾಸಕ ಅಶೋಕ್ ಪಟ್ಟಣ ಡಾ. ಬಾಬು ಜಗಜೀವನ್ ರಾಮ್ ವೃತ್ತ ಅನಾವರಣಕೇರಳ ರಾಜಕಾರಣದಲ್ಲಿ ಭಾರಿ ತಲ್ಲಣ : ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ಇಡಿ ದಾಳಿ ನಾಳೆ ಸಿಎಂ ನಿವಾಸದಲ್ಲಿ ಬ್ರೇಕ್ ಫಾಸ್ಟ್ ಮಿಟಿಂಗ್ : ಡಿ.ಕೆ ಶಿವಕುಮಾರ್ ಗೆ ಆತಿಥ್ಯ ಪ್ರಧಾನಿಯಾಗಿ 12 ವರ್ಷ ಪೂರೈಸಿದ ನರೇಂದ್ರ ಮೋದಿಸಿಸಿಬಿ ಭರ್ಜರಿ ಕಾರ್ಯಾಚರಣೆ : ಬೆಟ್ಟಿಂಗ್ ದಂಧೆಯಲ್ಲಿ ತೊಡಗಿದ್ದ 23 ಜನ ಅರೆಸ್ಟ್, 15 ಕೋಟಿ ರೂ. ಜಪ್ತಿ