ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿ ನಗರದಾದ್ಯಂತ 25 ಅಟಲ್ ಕ್ಯಾಂಟೀನ್ಗಳನ್ನು ಉದ್ಘಾಟನೆ ಮಾಡಿದ್ದಾರೆ.
ಈ ಕ್ಯಾಂಟೀನ್ಗಳಲ್ಲಿ 5 ರೂ.ಗೆ ಊಟ ನೀಡಲಾಗುವುದು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪುಣ್ಯಸ್ಮರಣೆಯ ಪ್ರಯುಕ್ತ ರೇಖಾ ಈ ಕ್ಯಾಂಟೀನ್ಗಳಿಗೆ ಚಾಲನೆ ನೀಡಿದ್ದು, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಜತೆಗಿದ್ದರು.
ಈ ಕ್ಯಾಂಟೀನ್ಗಳು ಏಮ್ಸ್, ಎಲ್ಎನ್ಜೆಪಿ ಸೇರಿ ಪ್ರಮುಖ ಆಸ್ಪತ್ರೆಗಳ ಬಳಿ, ಸ್ಲಂಗಳ ಬಳಿ ಕ್ಯಾಂಟೀನ್ಗಳನ್ನು ವರ್ಚುವಲ್ ಉದ್ಘಾಟನೆ ಮಾಡಲಾಯಿತು.


