Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಲ್ಲಿ ಈಶ್ವರ್ ಖಂಡ್ರೆಗೆ, ಪೂಜ್ಯರಿಂದ ಆಶಿರ್ವಾದ ಅಭಿಮಾನಿಗಳಿಂದ ಗೌರವ ಸನ್ಮಾನ

Advertisement

ಬೀದರ : ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಸತತವಾಗಿ ಮೂರನೇ ಬಾರಿಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಈಶ್ವರ ಬಿ. ಖಂಡ್ರೆ ಅವರಿಗೆ ಬೆಂಗಳೂರಿನಲ್ಲಿ ವಿವಿಧ ಗಣ್ಯರು ಸನ್ಮಾನಿಸಿ ಶುಭಾಶಯ ಕೋರಿದರು.

ಹಲಬರ್ಗಾ ಶ್ರೀಮಠದ ಪೂಜ್ಯ ಹಾವಗಿಲಿಂಗ ಶಿವಾಚಾರ್ಯರು ಹಾಗೂ ಪೂಜ್ಯ ಗಂಗಾಧರ ಶಿವಾಚಾರ್ಯರು ಸೇರಿ ಸಚಿವರಿಗೆ ಆಶಿರ್ವಾದ ನೀಡಿದರು,
ಜೈ ಭಾರತ ಮಾತಾ ಸೇವಾ ಸಮಿತಿಯ ಭಾಲ್ಕಿ ತಾಲೂಕು ಅಧ್ಯಕ್ಷರಾದ ಪಪ್ಪು ಪಾಟೀಲ್ ಖಾನಾಪುರ್ ಹಾಗೂ ಆರ್. ಆರ್. ಪಾಟೀಲ್ ಅವರು ಸಚಿವ ಈಶ್ವರ್ ಖಂಡ್ರೆ ಅವರನ್ನು ಭೇಟಿಯಾಗಿ ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಆತ್ಮೀಯವಾಗಿ ಗೌರವಿಸಿದರು.

ಸತತ ಮೂರನೇ ಬಾರಿ ಸಚಿವರಾಗಿ ರಾಜ್ಯದ ಜನಸೇವೆಗೆ ಅವಕಾಶ ದೊರೆತಿರುವುದು ಬೀದರ ಜಿಲ್ಲೆಯ ಜನತೆಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಪೂಜ್ಯರು, ಗಣ್ಯರು ಅಭಿಪ್ರಾಯಪಟ್ಟರು. ಸಚಿವ ಈಶ್ವರ್ ಖಂಡ್ರೆ ಅವರ ನೇತೃತ್ವದಲ್ಲಿ ರಾಜ್ಯ ಹಾಗೂ ಜಿಲ್ಲೆಯ ಅಭಿವೃದ್ಧಿಗೆ ಇನ್ನಷ್ಟು ವೇಗ ಸಿಗಲಿ ಎಂದು ಶುಭ ಹಾರೈಸಿದರು.

ಸನ್ಮಾನ ಸ್ವೀಕರಿಸಿದ ಈಶ್ವರ್ ಖಂಡ್ರೆ ಅವರು ಜನರ ಪ್ರೀತಿ, ವಿಶ್ವಾಸ ಮತ್ತು ಆಶೀರ್ವಾದಕ್ಕೆ ಕೃತಜ್ಞತೆ ಸಲ್ಲಿಸಿ, ಜನರ ನಿರೀಕ್ಷೆಗಳಿಗೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವ ಸಂಕಲ್ಪವನ್ನು ವ್ಯಕ್ತಪಡಿಸಿದರು.
 

ವರದಿ :ಸಂತೋಷ ಬಿಜಿ ಪಾಟೀಲ

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಪ್ರೇಯಸಿಯ ಅಗಲಿಕೆಯನ್ನು ತಡೆಯಲಾರದೆ, ಆಕೆಯ ಹುಟ್ಟು ಹಬ್ಬದಂದೇ ಯುವಕ ಆತ್ಮಹತ್ಯೆ ಒಂಟಿಯಾದ ಸಿದ್ದರಾಮಯ್ಯ : ಇತ್ತ ನಮಸ್ಕಾರ ಮಾಡಿ ದಾಟಿದ ಡಿ. ಕೆ ಶಿವಕುಮಾರ್ಬೆಂಗಳೂರಲ್ಲಿ ಈಶ್ವರ್ ಖಂಡ್ರೆಗೆ, ಪೂಜ್ಯರಿಂದ ಆಶಿರ್ವಾದ ಅಭಿಮಾನಿಗಳಿಂದ ಗೌರವ ಸನ್ಮಾನಶೀಘ್ರದಲ್ಲೇ ಪಾಲಿಮರ್ ಅಥವಾ ಪ್ಲಾಸ್ಟಿಕ್ ನೋಟುಗಳು : ಗವರ್ನರ್ ಸಂಜಯ್ ಮಲ್ಹೋತ್ರಾ ಜಾಹೀರಾತುನಲ್ಲಿ ಡಿಸಿಎಂ ಫೋಟೋ ಮಾಯಾ : ಜೆಡಿಎಸ್ ಆಕ್ರೋಶ ಬಿಕೆಐಟಿ ಭಾಲ್ಕಿಯಲ್ಲಿ ವಿವೇಚನಾ ಕನ್ಸ್ಟ್ರಕ್ಷನ್ಸ್ ವತಿಯಿಂದ ಕ್ಯಾಂಪಸ್ ನೇಮಕಾತಿ ಅಭಿಯಾನಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಚಾಲಕ ಹುದ್ದೆಗಳಿಗೆ ಅರ್ಜಿ ಆಹ್ವಾನ : ತಿಂಗಳಿಗೆ 67600 ಸಂಬಳ ರಾಮಲಿಂಗಾರೆಡ್ಡಿ ಜೊತೆಗಿನ ಸಿಎಂ ಸಂಧಾನ ಸಕ್ಸಸ್ ರಾಜ್ಯದಲ್ಲಿ ಖಾಲಿರುವ 3,395 ಕಾನ್ಸ್ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನವಿವಾಹ ನೋಂದಣಿಗೆ ಆಧಾರ್ ಕಾರ್ಡ್ ವಯಸ್ಸಿನ ದಾಖಲೆ ಅಲ್ಲ : ರಾಜ್ಯ ಸರ್ಕಾರ ಆದೇಶ