ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಫಲಿತಾಂಶ ಬಂದಾಗಿನಿAದಲೂ ಒಂದಿಲ್ಲೊAದು ಬೆಳವಣಿಗೆಗಳು ನಡೆಯುತ್ತಲೇ ಇದ್ದು, ಇದೀಗ ಪ. ಬಂಗಾಳ ರಾಜ್ಯಪಾಲರು ಮಮತಾ ಕ್ಯಾಬಿನೆಟ್ ಅನ್ನು ವಿಸರ್ಜನೆಗೊಳಿಸಿದ್ದು, ಪ್ರಪ್ರಥಮ ಬಿಜೆಪಿ ಸರಕಾರ ರಚನೆಗೆ ವೇದಿಕೆ ಸಿದ್ದವಾಗಿದೆ.
ಚುನಾವಣೆಯಲ್ಲಿ ಸಾಕಷ್ಟು ಅಕ್ರಮ ನಡೆದಿದ್ದು, ಅಡ್ಡದಾರಿಯಿಂದ ಬಿಜೆಪಿ ಗೆದ್ದಿದೆ. ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದರು.
ತದನಂತರ ಇದೀಗ ರಾಜ್ಯಪಾಲರು ಅಲ್ಲಿನ ಸರಕಾರವನ್ನು ವಜಾಗೊಳಿಸಿದ್ದು, ಬಿಜೆಪಿ ಸರಕಾರ ರಚನೆಯಾಗಲಿದೆ. ಮೇ. ೮ ರಂದು ಪ. ಬಂಗಾಳ ನೂತನ ಬಿಜೆಪಿ ಶಾಸಕರ ಸಭೆ ಕರೆಯಲಾಗಿದ್ದು, ಅಲ್ಲಿ ಸಂಸದೀಯ ಮಂಡಳಿಯ ನೂತನ ನಾಯಕನನ್ನು ಆಯ್ಕೆ ಮಾಡಲಿರುವ ಬಿಜೆಪಿ ನೂತನ ಸಿಎಂ ಆಯ್ಕೆ ಮಾಡಲಿದೆ.
ಪ. ಬಂಗಾಳದಲ್ಲಿ ಬಿಜೆಪಿ ಸಿಎಂ ಆಯ್ಕೆ ಜವಾಬ್ದಾರಿಯನ್ನು ಕೇಂದ್ರ ಸಚಿವ ಅಮಿತ್ ಷಾ ಅವರಿಗೆ ವಹಿಸಲಾಗಿದೆ.

