ಸಿಂಧನೂರು : ವಾಲ್ಮೀಕಿ ನಾಯಕರ ಸಮಾಜದ ಏಳಿಗೆಗಾಗಿ ಸಮಾಜದ ಪ್ರತಿಯೊಬ್ಬರು ಸಹಕಾರ ಸಲಹೆ ಮಾಡಿದಾಗ ಮಾತ್ರ ವಾಲ್ಮೀಕಿ ನಾಯಕ ಸಮಾಜವು ಸದೃಢವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ರಾಜ್ಯ ಸಂಘಟನಾ ಕಾರ್ಯದರ್ಶಿ ಗರುಡ ನಾಯಕ ರಾಯಚೂರು ಹೇಳಿದರು,
ರಾಜ್ಯಧ್ಯಕ್ಷರಾದ ರಮೇಶ್ ಹಿರೇ ಜಂಬೂರು ರವರ ಆದೇಶದನ್ವಯ ನಗರದ ಸರ್ಕ್ಯೂಟ್ ಹೌಸಿನಲ್ಲಿ ಆಯೋಜಿಸಿದ ಸಿಂಧನೂರು ತಾಲೂಕ ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ
ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೇವಾ ಸಿರಿ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಪ್ರದೀಪ್ ಪೂಜಾರ್, ಕಾನಿಪ ಧ್ವನಿ ತಾಲೂಕಾಧ್ಯಕ್ಷ ಪತ್ರಕರ್ತ ವೆಂಕಟೇಶ್ ನಾಯಕ ಬೂತಲದಿನ್ನಿ ಅವರನ್ನು ನಾಯಕರ ಒಕ್ಕೂಟದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಕರ್ನಾಟಕ ನಾಯಕರ ಒಕ್ಕೂಟ "ತಾಲೂಕ ಕಾನೂನು ಸಲಹೆಗಾರರಾಗಿ ಪರಶುರಾಮ್ ನಾಯಕ ವಕೀಲರು, ಮತ್ತು "ತಾಲೂಕ ಸಂಘಟನಾ ಕಾರ್ಯದರ್ಶಿಗಳಾಗಿ ನಿರುಪಾದಿ ಕನ್ನಾರಿ' ಅವರನ್ನು ಆಯ್ಕೆ ಮಾಡಿ ನೇಮಕಾತಿ ಆದೇಶ ಪತ್ರ ನೀಡಲಾಯಿತು,
ಈ ಸಂದರ್ಭದಲ್ಲಿ ಸಿಂಧನೂರು ತಾಲೂಕ ಅಧ್ಯಕ್ಷ ಸಿದ್ದಪ್ಪ ನಾಯಕ ಗೊರೆಬಾಳ. ತಾಲೂಕು ಉಪಾಧ್ಯಕ್ಷ ಶರಣಬಸವ ಬೂದಿವಾಳ. ದೇವದುರ್ಗ ತಾಲೂಕ ಅಧ್ಯಕ್ಷ ಚೆನ್ನಬಸವ ನಾಯಕ ಸೇರಿದಂತೆ ರಾಜು ನಾಯಕ ಬೆಳಗುರ್ಕಿ. ಆದೇಶ ನಾಯಕ ಏಳು ರಾಗಿ ಕ್ಯಾಂಪ್. ಚೆನ್ನ ಗೌಡ ನಾಯಕ ಏಳೂರಾಗಿ ಕ್ಯಾಂಪ್. ವೆಂಕೋಬ ನಾಯಕ ಬೂದಿವಾಳ. ಕೆ ಬಸವರಾಜ ನಾಯಕ ಹುಡಾ. ಕನಕ ಮೂರ್ತಿ ಹುಲಿಹೈದರ್ ಇದ್ದರು
ವರದಿ:ಬಸವರಾಜ ಬುಕ್ಕನಹಟ್ಟಿ


