ಚಿಕ್ಕೋಡಿ : ತಾಲೂಕಿನ ಶಿರಗಾoವ ಗ್ರಾಮ ಪಂಚಾಯಿತಿ ಗ್ರಾಮದ ಜನರ ಬೇಡಿಕೆಗಳಿಗೆ ಹಾಗೂ ಗ್ರಾಮ ಅಭಿವೃದ್ಧಿ ಕಾಮಗಾರಿಗಳಿಗೆ ಸ್ಪಂದಿಸದೆ ಪಂಚಾಯಿತಿಯ ಬೋರ್ಡ್ ಮೇಲೆ ಹೆಸರು ಬರೆಯಲಾಗದೆ ಪಂಚಾಯಿತಿಯ ಎಷ್ಟೇ ಸುದ್ದಿಗಳಾದರೂ ಎಷ್ಟೇ ಹೋರಾಟಗಳು ನಡೆದರು ತನ್ನನ್ನು ಕ್ಯಾರೆಯನ್ನದ ಅಧಿಕಾರಿ.
ಈಗ ಗ್ರಾಮದಲ್ಲಿ ಯಾವುದೇ ಒಂದು ಚರಂಡಿ ಕಾಮಗಾರಿ ಸರಿಯಾಗಿ ನಡೆಯದೆ ಬಿಕ್ಕಟ್ಟು ಪರಿಸ್ಥಿತಿ ಎದುರಾಗಿದ್ದರಿಂದ ಜನರ ಪರದಾಟ ಎಲ್ಲಿ ನೋಡಿದರೂ ಕಳಪೆ ನೀರಿನ ಹೊಂಡಗಳು ಚರಂಡಿಗಳು ರಸ್ತೆಯ ಮೇಲೆ ತುಂಬಿ ನಿಂತಿರುವ ದೃಶ್ಯ ನೀವೇ ನೋಡಿ.
ಪ್ರತಿ ವರ್ಷವೂ ಹಲವಾರು ಸಂಘಟನೆಗಳು ಹೋರಾಟ ಮಾಡುತ್ತಿದ್ದರು ಅಧಿಕಾರಿಗಳು ಕ್ಯಾರೆಯನ್ನದೆ ಇತ್ತ ಕಡೆ ಗಮನಹರಿಸದೆ ಗ್ರಾಮದ ಪರಿಸ್ಥಿತಿಯನ್ನು ಹದಗೆಡಿಸಿರುವ ಸ್ಥಿತಿ ನಿರ್ಮಾಣವಾಗಿದೆ.
ಮೇಲಾಧಿಕಾರಿಗಳು ಯಾಕೆ ಎತ್ತು ಗಮನ ಹರಿಸುತ್ತಿಲ್ಲ ಎಂಬ ಸಂಶಯ ಉಂಟಾಗಿದೆ ಒಬ್ಬ ಸರಿಯಾದ ವಿಡಿಯೋ ಗ್ರಾಮ ಪಂಚಾಯತಿಗೆ ಯಾಕೆ ನೀಡುತ್ತಿಲ್ಲ ಪಂಚಾಯಿತಿ ಸಿಬ್ಬಂದಿಗಳು ಸರಿಯಾಗಿ ಕೆಲಸ ಕಾರ್ಯವನ್ನು ಮಾಡುತ್ತಿಲ್ಲ ಯಾಕೆ ಎಂಬುದು ಸಂಶಯಕ್ಕೆ ಕಾರಣವಾಗಿದೆ.
ಇದೀಗ ಈ ಪರಿಸ್ಥಿತಿಯನ್ನು ಕೆ.ಆರ್.ಎಸ್. ಪಕ್ಷದ ಸತೀಶ್ ಪೂಜಾರಿಯವರು ನಮ್ಮ ವಾಹಿನಿಗೆ ನೀಡಿದ ಮಾಹಿತಿ ಈ ರೀತಿಯಾಗಿದೆ ಹಾಗೂ ಶಿರಗಾಂವ ಗ್ರಾಮದ ಕೆಲವರು ಈ ಪರಿಸ್ಥಿತಿ ತಾಳಲಾಗದೆ ನಮ್ಮ ವಾಹಿನಿಗೆ ಮಾಹಿತಿಯನ್ನು ನೀಡಿದ್ದಾರೆ ನೋಡೋಣ ಬನ್ನಿ.
ಗ್ರಾಮದಲ್ಲಿ ಯಾರಾದರೂ ಅಂತ್ಯಗೊಂಡರೆ ಅವರ ಅಂತ್ಯಸಂಸ್ಕಾರ ಮಾಡುವುದಕ್ಕೆ ರುದ್ರ ಭೂಮಿಯಲ್ಲಿ ಸರಿಯಾದ ಸೇಡ ಕೂಡ ಇಲ್ಲಾ ಗೋರಪಡೆ, ಕುಂಬಾರ, ಸುತಾರ, ಕೊಲೆ, ಭೋಪಳೆ, ಕಂಬಾರ, ಕುಲಕರ್ಣಿ, ಕಡಲಸ್ಕರ್, ರವರಿಗೆ ಸ್ಮಶಾನಭೂಮಿಯು ಇಲ್ಲ ಕೆ. ಆರ್. ಎಸ್. ಪಕ್ಷದವರು ಎಷ್ಟು ಬಾರಿ ಹೇಳಿ ಹೋರಾಟ ಮಾಡಿದರು ಸಂಬಂಧಪಟ್ಟ ಪಂಚಾಯಿತಿ ಪಿಡಿಓ ಅವರು ಕ್ಯಾರೆ ಅನ್ನುತ್ತಿಲ್ಲ ಮಾಡುತ್ತಿಲ್ಲ ಏಕೆ ಎಂಬ ಸಂಶಯ ವ್ಯಕ್ತವಾಗುತ್ತಿದೆ.
ವರದಿ :ರಾಜು ಮುಂಡೆ


