LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
National News

ಹರಿಯಾಣದಲ್ಲಿ ಬೆಚ್ಚಿಬೀಳಿಸೋ ಕೃತ್ಯ: ಪತಿಯನ್ನೇ ಕೊಂದು ಕರುಳು ಬಗೆದ ಪಾಪಿ ಪತ್ನಿ

Advertisement

ಹರಿಯಾಣದ ಕುರುಕ್ಷೇತ್ರದಲ್ಲಿ ಬೆಚ್ಚಿಬೀಳಿಸುವ ಘಟನೆ. ಮಹಿಳೆಯೊಬ್ಬರು ತನ್ನ ಪತಿಯನ್ನು ಚಾಕುವಿನಿಂದ ಭೀಕರವಾಗಿ ಹತ್ಯೆ ಮಾಡಿ, ಆತನ ಹೊಟ್ಟೆಯನ್ನು ಸೀಳಿ ಕರುಳುಗಳನ್ನು ಹೊರತೆಗೆದಿದ್ದಾರೆ. ಘಟನೆ ಬೆಳಕಿಗೆ ಬಂದ ಬಳಿಕ ಆಕೆ ಮನೆಯ ಮೇಲ್ಛಾವಣಿಯಿಂದ ಜಿಗಿದು ಗಾಯಗೊಂಡಿದ್ದಾಳೆ.

ಮೃತರನ್ನು ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯ ಮೂಲದ ರಾಜೇಶ್ ಎಂದು ಗುರುತಿಸಲಾಗಿದೆ. ಅವರು ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲ ಕುರುಕ್ಷೇತ್ರದಲ್ಲಿ ಪತ್ನಿ ವಿಮ್ಲಾ ದೇವಿ ಜೊತೆ ವಾಸಿಸುತ್ತಿದ್ದರು. ಪೆಹೋವಾ ರಸ್ತೆಯಲ್ಲಿ ನೀರು ಪೂರೈಕೆ ಕೆಲಸ ಮಾಡುತ್ತಿದ್ದರು ಎಂದು ವರದಿಯಾಗಿದೆ.

ಜಗಳದ ಬಳಿಕ ಭೀಕರ ಹತ್ಯೆ

ಸಂಜೆ ಸುಮಾರು 5 ಗಂಟೆಗೆ ರಾಜೇಶ್ ಮತ್ತು ವಿಮ್ಲಾ ಜಗಳವಾಡುತ್ತಿರುವ ಶಬ್ದವನ್ನು ಮನೆಯ ಮಾಲೀಕ ಕೇಳಿದ್ದಾರೆ.

ತಕ್ಷಣ ಮೇಲ್ಛಾವಣಿಗೆ ತೆರಳಿದಾಗ ರಾಜೇಶ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮತ್ತೊಂದೆಡೆ, ವಿಮ್ಲಾ ಆತನ ಕರುಳುಗಳನ್ನು ಚೀಲವೊಂದರಲ್ಲಿ ಹಾಕುತ್ತಿದ್ದಳು ಎಂದು ವರದಿಯಾಗಿದೆ.

ಮನೆಯ ಮಾಲೀಕನನ್ನು ನೋಡಿದ ಕೂಡಲೇ ವಿಮ್ಲಾ ಗಾಬರಿಗೊಂಡು ಮೇಲ್ಛಾವಣಿಯಿಂದ ಕೆಳಗೆ ಜಿಗಿದಿದ್ದಾಳೆ. ಈ ವೇಳೆ ಆಕೆಗೆ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ವೃಶಬ್ ಪಂತ್ ಇನ್ನೊಂದು ವಿಕ್ರಮ CPI ನೇತೃತ್ವದಲ್ಲಿ ಈದ್ ಮಿಲಾದ್ ಶಾಂತಿ ಸಭೆಕೊಲಂಬೊ ಟೆಸ್ಟ್ :ಬ್ರಹತ್ ಮೊತ್ತದತ್ ಭಾರತಬಸ್‌ಗಳಲ್ಲಿ ಉಚಿತ ಪ್ರಯಾಣ, ವರ್ಷಕ್ಕೆ 3 ಉಚಿತ ಸಿಲಿಂಡರ್‌: CM ವಿಜಯ್‌ 'ಸೂಪರ್‌ ಸಿಕ್ಸ್‌' ಘೋಷಣೆಸೆಲ್ಫಿ' ಕ್ಲಿಕ್ಕಿಸಿಕೊಳ್ಳಲು ಬಂದು ರಾಹುಲ್ ಗಾಂಧಿ ಕೆನ್ನೆಗೆ ಮುತ್ತಿಟ್ಟ ಯುವತಿ : ವಿಡಿಯೋ ವೈರಲ್ ನಿಡಗುಂದಿ ಕೇನಾಲ್‌ಗೆ ಜಾರಿ ಬಿದ್ದು ವ್ಯಕ್ತಿ ನಾಪತ್ತೆ: ಅಗ್ನಿಶಾಮಕ ಸಿಬ್ಬಂದಿಯಿಂದ ಶೋಧ ಕಾರ್ಯಚಿಕ್ಕಮಗಳೂರಿನಲ್ಲಿ ಟಿಪ್ಪು ಕಟೌಟ್ ವಿವಾದ:ಈದ್ ಮಿಲಾದ್ ವೇಳೆ ಪಾಕಿಸ್ತಾನಿ ಹಾಡು ವೈರಲ್ವಿದ್ಯಾರ್ಥಿನಿಯರ ಜೊತೆ ಸ್ನಾನ ಮಾಡಿದ ಪ್ರಾಂಶುಪಾಲ ಅಮಾನತು : ವಿಡಿಯೋ ವೈರಲ್ಈಸ್ಟ್ ಬೆಂಗಾಲ್ ಗೆ ಡುರಾಂಡ್ ಕಪ್ ಕಿರೀಟ ಕರ್ನಾಟಕ ಯುವಸೇನೆ ಸಮಿತಿವತಿಯಿಂದ  ಪುನೀತ್ ರಾಜಕುಮಾರ್ ಪುತ್ಥಳಿ ನಿರ್ಮಾಣಕ್ಕೆ ಗುದ್ದಲಿ ಪೂಜೆ: ಮಹೇಶ್ ರೆಡ್ಡಿ