ಗದಗ : ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ವಿಚಾರವಾಗಿ ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯೆ ನೀಡಿದ್ದು, ನನಗೆ ಬಹಳ ಕಿರುಕುಳ ನೀಡಿ, ಹಿಂಸೆ ನೀಡಿ ಸಿಎಂ ರಾಜೀನಾಮೆ ಪಡೆದಿದ್ದಾರೆ ಎಂದು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬೆಳ್ಳಟ್ಟಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ಕಿರುಕುಳ ಮತ್ತು ಹಿಂಸೆ ನೀಡಿ ಮುಖ್ಯಮಂತ್ರಿ ನನ್ನ ರಾಜೀನಾಮೆ ಪಡೆದಿದ್ದಾರೆ.
ನಾನು ನೋವಿನಿಂದ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದೆ. ನನ್ನ ರಾಜೀನಾಮೆ ಪಡೆಯಲು ಸ್ವತಃ ಸಿಎಂ ಬಂದು ಕುಳಿತಿದ್ದರು. ಸ್ಪೀಕರ್ ಕಚೇರಿಗೆ ಬಂದು ಒಂದುವರೆ ತಾಸು ಕುಳಿತಿದ್ದಾರೆ.
ಕಿರುಕುಳ ರೂಪದಲ್ಲಿ ನನ್ನ ರಾಜೀನಾಮೆಯನ್ನು ಪಡೆದಿದ್ದರು. ಕಿರುಕುಳ ನೀಡಿ ರಾಜೀನಾಮೆ ಪಡೆದಿದ್ದಕ್ಕೆ ನನಗೆ ನೋವಾಗಿದೆ.ರಾಜೀನಾಮೆ ಬಗ್ಗೆ ಬಸವರಾಜ್ ಹೊರಟ್ಟಿ ಬೇಸರ ಹೊರ ಹಾಕಿದ್ದಾರೆ.


